ಸಾಕಷ್ಟು ಸಾಕ್ಷಿ ಇದ್ದರೂ ಸಹ ಆಧಾರದ ಕೊರತೆಯಿದೆ ಎಂದು ಹೇಳಿರುವುದು ಅಚ್ಚರಿಯ ಸಂಗತಿ: ಸ್ನೇಹಮಯಿ ಕೃಷ್ಣ

0
Spread the love

ಮೈಸೂರು: ಸಾಕಷ್ಟು ಸಾಕ್ಷಿ ಇದ್ದರೂ ಸಹ ಆಧಾರದ ಕೊರತೆಯಿದೆ ಎಂದು ಹೇಳಿರುವುದು ನಿಜಕ್ಕೂ ಸಹ ಅಚ್ಚರಿಯ ಸಂಗತಿ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಾಕಷ್ಟು ಸಾಕ್ಷಿ, ಆಧಾರಗಳು ಇದ್ದರೂ ಸಹ ಯಾವ ಆಧಾರದ ಮೇಲೆ ಕೊರತೆಯಿದೆ ಎಂದು ಹೇಳಿರುವುದು ನಿಜಕ್ಕೂ ಸಹ ಅಚ್ಚರಿಯ ಸಂಗತಿ.

Advertisement

ಸಾಮಾನ್ಯ ವ್ಯಕ್ತಿಯೂ ಕೂಡ ಕೇವಲ ಎರಡು ಮೂರು ಸಾಕ್ಷಿ ನೋಡಿದರೂ ಅಪರಾಧ ಕೃತ್ಯ ನಡೆದಿದೆ ಎಂದು ಸ್ಷಷ್ಟವಾಗಿ ಹೇಳುತ್ತಾರೆ. ಆದರೂ ಕೂಡ ತನಿಖಾಧಿಕಾರಿಗೆ ಇದು ಗೊತ್ತಾಗಲಿಲ್ಲವೆಂದರೆ, ಅವರ ಬೌದ್ಧಿಕ ಮಟ್ಟ ಎಷ್ಟಿದೆ ಎಂದು ರಾಜ್ಯದ ಜನತೆ ಗಮನಿಸಬೇಕು ಎಂದು ಹೇಳಿದ್ದಾರೆ.

ಇನ್ನೂ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ವಾದ ಮಂಡಿಸಿದರೆ ಕೋರ್ಟ್​ ನಮ್ಮ ಅರ್ಜಿಯನ್ನು ಪರಿಗಣಿಸಿ, ಎಲ್ಲರನ್ನೂ ಆರೋಪಿಗಳೆಂದು ಹೇಳಿ ವಿಚಾರಣೆಗೊಳಪಡಿಸಲಿದೆ ಎಂಬ ವಿಶ್ವಾಸ ನಮಗಿದೆ. ಅಕ್ರಮ ವ್ಯವಹಾರ ನಡೆಸಿದ್ದಾರೆ ಎಂಬುದನ್ನು ಸಾಬೀತು ಮಾಡಲು ನನ್ನ ಬಳಿ ಬೇಕಾದ ಸಾಕ್ಷಿಗಳು ನನ್ನ ಬಳಿ ಇವೆ ಎಂದರು.


Spread the love

LEAVE A REPLY

Please enter your comment!
Please enter your name here