ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿ ವೈದ್ಯ, ಯುರಾಲಾಜಿಸ್ಟ್ ಹಾಗೂ ಕಸಿ ಶಸ್ತ್ರಚಿಕಿತ್ಸಕ ಇಟಲಿಯಲ್ಲಿ ಗ್ರಾಮೀಣ ಭಾಗದ ಆಸ್ಪತ್ರೆ ಒಂದು ಹೇಗೆ ಒಂಭತ್ತು ಕಿಡ್ನಿ ಕಸಿ ಆಪರೇಷನ್ ಮಾಡುವಲ್ಲಿ ಯಶಸ್ವಿಯಾಯಿತು ಎಂದು ವಿವರಿಸಿದರು. ಇದು ಹುಲಕೋಟಿ ಖಾಸಗಿ ಆಸ್ಪತ್ರೆಯ ಅಂಗಾಂಗ ಕಸಿ ತಂಡಕ್ಕೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.
ಇಟಲಿ ಮತ್ತು ಇತರ ದೇಶಗಳ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕರು ಕೈಗೆಟುಕುವ ವೆಚ್ಚದಲ್ಲಿ ಗ್ರಾಮೀಣ ಆಸ್ಪತ್ರೆಯಲ್ಲಿ ಕಸಿ ಮಾಡುವಿಕೆಯನ್ನು ಬೆಂಬಲಿಸಲು ಆಸಕ್ತಿ ತೋರಿಸಿದ್ದಾರೆ. ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ಡಾ. ಅವಿನಾಶ್ ಓದುಗೌಡರ್, ಇಟಲಿಯ ಸಿಸಿಲಿಯ ವಲ್ಕಾನೋದಲ್ಲಿ ನಾಲ್ಕನೇ ಅಂತಾರಾಷ್ಟ್ರೀಯ ಕಾಂಗ್ರೆಸ್ಗೆ ಹಾಜರಾಗಲು ಆಹ್ವಾನವನ್ನು ಪಡೆದ ನಂತರ ಇಟಲಿಗೆ ಭೇಟಿ ನೀಡಿದರು. ಗದಗ ಜಿಲ್ಲೆಯ ಗ್ರಾಮೀಣ ಆಸ್ಪತ್ರೆಯಲ್ಲಿ ಯಶಸ್ವಿ ಒಂಭತ್ತು ಕಸಿಗಳ ಬಗ್ಗೆ ಡಾ. ಅವಿನಾಶ್ ಹೇಳಿದರು. ಈ ಪರಿಕಲ್ಪನೆಯನ್ನು ಇಟಲಿಯ ವೈದ್ಯರು ಹೆಚ್ಚು ಮೆಚ್ಚಿಕೊಂಡರು ಮತ್ತು ಅವರು ಸಹ ಈ ಉದಾತ್ತ ಕಾರ್ಯವನ್ನು ಬೆಂಬಲಿಸಲು ಆಸಕ್ತಿ ವ್ಯಕ್ತಪಡಿಸಿದರು.
ಹಲವಾರು ಯಶಸ್ವಿ ಮೂತ್ರಪಿಂಡ ಕಸಿ ಮಾಡಿದ ನಂತರ, ಈಗ ಕೆ.ಹೆಚ್. ಪಾಟೀಲ್ ಗ್ರಾಮೀಣ ಆಸ್ಪತ್ರೆಯು ಅಗತ್ಯವಿರುವ ಗ್ರಾಮೀಣ ಸಮುದಾಯಗಳಿಗೆ ಕಡಿಮೆ ವೆಚ್ಚದ ಚಿಕಿತ್ಸೆಗಳೊಂದಿಗೆ ಸಹಾಯ ಮಾಡಲು ಲಿವರ್ ಕಸಿ ಸೌಲಭ್ಯವನ್ನು ಸ್ಥಾಪಿಸಲು ಯೋಜಿಸುತ್ತಿದೆ. ಸಾಮಾನ್ಯ ಜನರಿಗೆ ಮೂತ್ರಪಿಂಡ ಕಸಿ ಒಂದು ಕನಸಾಗಿದೆ. ಆದರೆ ಗದಗ ಜಿಲ್ಲೆಯ ಹುಲಕೋಟಿಯಲ್ಲಿರುವ ಆರ್ಎಂಎಸ್ಎಸ್ ಕೆ.ಎಚ್. ಪಾಟೀಲ್ ಆಸ್ಪತ್ರೆ ಕಂಪ್ಯಾರೇಟಿವ್ಲಿ ಅಫೋರ್ಡಬಲ್ ಬೆಲೆಗೆ ಯಶಸ್ವಿ ಕಸಿ ಮಾಡಿದ ನಂತರ ಕನಸನ್ನು ನನಸಾಗಿಸಿತು ಮತ್ತು ಒಂದು ಕಸಿಯನ್ನು ಸಂಕಲ್ಪ ಕಿಡ್ನಿ ಕೇರ್ ಫೌಂಡೇಶನ್ ತಂಡ ಪ್ರಾಯೋಜಿಸಿದೆ. ಗದಗ ವೈದ್ಯರು ಸಹ ಅಂಗಾಂಗ ಕಸಿ ಮತ್ತು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ನೆರೆಯ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಆರ್ಎಂಎಸ್ಎಸ್ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ್ ಈ ಬಗ್ಗೆ ಮಾತನಾಡಿ, ಡಾ. ಅವಿನಾಶ್, ಡಾ. ದೀಪಕ್ ಕುರಟ್ಟಿ, ಡಾ. ಪವನ್ ಕೋಳಿವಾಡ, ಡಾ. ಮೇಘನಾ, ಡಾ. ಪಂಚಗರ್, ಡಾ. ವಿಶಾಲ, ವಂದನಾ ಮತ್ತು ಹರೀಶ್ ಅವರ ಸಾಮೂಹಿಕ ಪ್ರಯತ್ನ ಇದಾಗಿದ್ದು, ಇದಕ್ಕಾಗಿ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಕಾರ್ಯದರ್ಶಿ ಡಾ. ವೇಮನ ಸಾವುಕಾರ ಮತ್ತು ತಂಡದ ಎಲ್ಲಾ ಸದಸ್ಯರಿಗೆ ನಾವು ಈ ಶ್ರೇಯಸ್ಸನ್ನು ನೀಡಲು ಬಯಸುತ್ತೇವೆ ಎಂದು ಹೇಳಿದರು.
ಗದಗದ ಹಿರಿಯ ವೈದ್ಯರಾದ ಡಾ. ಪ್ಯಾರಾಲಿ ನೂರಾನಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗದಗ ವೈದ್ಯರಿಗೆ ಆಹ್ವಾನ ಬಂದಿದ್ದರಿಂದ ಮತ್ತು ಇಟಾಲಿಯನ್ ವೈದ್ಯರು ನಮ್ಮ ಕೆಲಸವನ್ನು ಮೆಚ್ಚಿದ್ದರಿಂದ ನಮಗೆ ಸಂತೋಷದ ಸಂಗತಿಯಾಗಿದೆ. ಇಲ್ಲಿನ ಗ್ರಾಮೀಣ ಸಮುದಾಯಕ್ಕೆ ಸಹಾಯ ಮಾಡಲು ನಾವು ಯಕೃತ ಕಸಿ ಸೌಲಭ್ಯವನ್ನು ಸ್ಥಾಪಿಸಲು ಗಂಭೀರವಾಗಿ ಯೋಜಿಸುತ್ತಿದ್ದೇವೆ. ಎಲ್ಲಾ ಬೆಂಬಲಕ್ಕಾಗಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.