ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮುಳಗುಂದ ರಸ್ತೆಯ ಹುಡ್ಕೋ ಬಡಾವಣೆಯಲ್ಲಿರುವ ಪರಮಹಂಸ ಪರಿವಾಜಕಾರ್ಯ ಶ್ರೀ 108 ಜಗದ್ಗುರು ಸಚ್ಚಿದಾನಂದ ಮಹಾಸ್ವಾಮಿಗಳ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಸಚ್ಚಿದಾನಂದ ಮಹಾಸ್ವಾಮಿಗಳವರ ಮಹಾ ರಥೋತ್ಸವವು ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಜರುಗಿತು.
Advertisement
ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸೇರಿದಂತೆ ಕೃಷ್ಣಗೌಡ ಪಾಟೀಲ, ಕಾರ್ಯದರ್ಶಿ ರವಿಕುಮಾರ ರಡ್ಡಿ, ಜಾತ್ರಾ ಕಮಿಟಿ ಅಧ್ಯಕ್ಷರಾದ ಯಲ್ಲಪ್ಪ ಬದಾಮಿ, ಟ್ರಸ್ಟಿಗಳಾದ ಸಿಕಂದರ ಬಡೇಖಾನ, ಸುರೇಶ ಮುಳಗುಂದ, ಕೃಷ್ಣ ಹಡಪದ, ನಗರಸಭಾ ಮಾಜಿ ಸದಸ್ಯ ಅನಿಲ ಗರಗ ಸೇರಿದಂತೆ ಅಪಾರ ಭಕ್ತಾಧಿಗಳು ಪಾಲ್ಗೊಂಡಿದ್ದರು.