ಕೊಪ್ಪಳ:ನವವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆ ಮಾಡುವಂತಿಲ್ಲ ಎಂದು ಧಾರವಾಡ ಹೈಕೋರ್ಟ್ ಹೇಳಿದೆ.
Advertisement
ನವವೃಂದಾವನದಲ್ಲಿಯೇ ಜಯತೀರ್ಥರ ವೃಂದಾವನವಿದೆ ಎಂದು ರಾಯರ ಮಠದವರು ವಾದ ಮಂಡಿಸಿದ್ದರು. ಇದು ರಘುವರ್ಯರ ವೃಂದಾವನ ಎಂದು ಉತ್ತರಾಧಿಮಠದವರು ವಾದಿಸಿದ್ದು ಜಯತೀರ್ಥರ ವೃಂದಾವನವು, ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿದೆ ಎಂದು ವಾದಿಸಿದ್ದಾರೆ. ಹೀಗಾಗಿ ನವವೃಂದಾವನ ಗದ್ದೆಯಲ್ಲಿ ಜಯತೀರ್ಥರ ಆರಾಧನೆ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಸದ್ಯ ನವವೃಂದಾವನ ಗಡ್ಡೆಯಲ್ಲಿ ಆರಾಧನೆಗೆ ಅವಕಾಶ ನೀಡದ ಹಿನ್ನೆಲೆ ಆನೆಗೊಂದಿಯ ರಾಯರ ಮಠದಲ್ಲಿ ಆಚರಿಸಲು ಮಂತ್ರಾಲಯ ಮಠದವರು ಪ್ರಕಟಣೆ ಹೊರಡಿಸಿದ್ದಾರೆ. ಇದು ತಾತ್ಕಾಲಿಕ ಪ್ರಕಟಣೆಯಾಗಿದ್ದು ಮುಂದಿನ ದಿನದಲ್ಲಿ ರಾಯರ ಕೃಪೆಯಿಂದ ನಮ್ಮ ಪರವಾಗಿ ತೀರ್ಪು ಬರಲಿದೆ ಎಂಬ ವಿಶ್ವಾಸವನ್ನು ರಾಯರ ಮಠ ವ್ಯಕ್ತಪಡಿಸಿದೆ.