ಕಮಲ್​ ಹಾಸನ್ ಮಾತನಾಡಿದ್ದು ತಪ್ಪು.. ಆಧಾರವಿಲ್ಲದೇ ಹೇಳಿಕೆ ಕೊಡಬಾರದು: ಪ್ರಲ್ಹಾದ್​ ಜೋಶಿ ಕಿಡಿ!

0
Spread the love

ಹುಬ್ಬಳ್ಳಿ:- ಕಮಲ್​ ಹಾಸನ್ ಮಾತನಾಡಿದ್ದು ತಪ್ಪು.. ಆಧಾರವಿಲ್ಲದೇ ಹೇಳಿಕೆ ಕೊಡಬಾರದು ಎಂದು ಕಮಲ್​ ಹಾಸನ್​ ವಿರುದ್ಧ ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕನ್ನಡ ಹಾಗೂ ತಮಿಳು ಎರಡೂ ಭಾಷೆ ಪುರಾತನ ಭಾಷೆಗಳಾಗಿವೆ. ತಮಿಳು ಬಗ್ಗೆ ನಾವು ಕೆಟ್ಟದಾಗಿ ಮಾತನಾಡಲ್ಲ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಈವರೆಗೂ ಮಾತಾಡಿಲ್ಲ. ಕಾಂಗ್ರೆಸ್​ನ ಯಾರು ಕೂಡ ನಟನ ಹೇಳಿಕೆಯನ್ನು ಖಂಡಿಸಿ ಮಾತನಾಡುತ್ತಿಲ್ಲ. ಈ ಬಗ್ಗೆ ಕನ್ನಡ ಪರ ಹೋರಾಟಗಾರರು ಗಮನಹರಿಸಬೇಕು ಎಂದಿದ್ದಾರೆ.

ಇನ್ನು ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರು ಟಾರ್ಗೆಟ್ ಆಗುತ್ತಿದ್ದಾರೆ. ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ರಾಜ್ಯವಾಗಿದೆ. ಬಾಯಿಗೆ ಬಂದಂಗೆ ಮಾತನಾಡೋರಿಗೆ ಏನೂ ಮಾಡುವುದಿಲ್ಲ. ಅವರಿಗೆ ವೋಟ್ ಹಾಕದೆ ಇರೋರ ಮೇಲೆ ಕೇಸ್ ಹಾಕುತ್ತಾರೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here