ಸಮಾಜಸೇವೆಗೆ ಒಲಿದ `ಕನ್ನಡ ಮಾಣಿಕ್ಯ’ ಪ್ರಶಸ್ತಿ

0
'Kannada Manikya' award for social service
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಖಾಸಗಿ ಕನ್ನಡ ನ್ಯೂಸ್ ಚಾನಲ್ ವತಿಯಿಂದ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡುವ ಪ್ರಶಸ್ತಿಗಳಲ್ಲಿ ಒಂದಾದ `ಕನ್ನಡ ಮಾಣಿಕ್ಯ’ ಪ್ರಶಸ್ತಿಯನ್ನು ರವಿ ಹೊಂಬಾಳಿ ಅವರಿಗೆ ನೀಡಿ ಗೌರವಿಸಲಾಗಿದೆ.

Advertisement

ಪ್ರಸ್ತುತ ಗದಗ ನಗರದಲ್ಲಿ ವಾಸಿಸುತ್ತಿದ್ದು, ಸುಮಾರು ನಾಲ್ಕು ವರ್ಷಗಳಿಂದ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇವರ ಸಾಮಾಜಿಕ ಚಟುವಟಿಕೆಗಳನ್ನು ಪರಿಗಣಿಸಿ ಹೈಬ್ರಿಡ್ ಕನ್ನಡ ನ್ಯೂಸ್ ಚಾನೆಲ್ ವತಿಯಿಂದ ಬೆಂಗಳೂರಿನ ಗ್ರೀನ್ ಪಾತ್ ಸಭಾಭವನದಲ್ಲಿ ಸದರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


Spread the love

LEAVE A REPLY

Please enter your comment!
Please enter your name here