HomeKarnataka Newsಕರ್ನಾಟಕ ರಾಜಭವನಕ್ಕೆ ಮರುನಾಮಕರಣ: ಹೊಸ ಹೆಸರೇನು ಗೊತ್ತಾ!?

ಕರ್ನಾಟಕ ರಾಜಭವನಕ್ಕೆ ಮರುನಾಮಕರಣ: ಹೊಸ ಹೆಸರೇನು ಗೊತ್ತಾ!?

For Dai;y Updates Join Our whatsapp Group

Spread the love

ಬೆಂಗಳೂರು:- ದೇಶದಲ್ಲಿರುವ ರಾಜ್ಯಪಾಲರ ನಿವಾಸಗಳಾದ ರಾಜ ಭವನಗಳ ಹೆಸರು ಅನ್ನು ಬದಲಾಯಿಸಿ, ಲೋಕ ಭವನ್ ಎಂದು ಹೊಸ ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯಪಾಲರು ರಾಜಭವನದ ಹೆಸರನ್ನು ಬದಲಾವಣೆ ಮಾಡಿದ್ದು, ರಾಜಭವನವನ್ನು ಇನ್ನೂ ‘ಲೋಕ ಭವನ’ ಎಂದು ಮರುನಾಮಕರಣ ಮಾಡಲಾಗಿದೆ. ತಕ್ಷಣದಿಂದಲೇ ರಾಜಭವನದ ಎಲ್ಲ ಅಧಿಕೃತ ದಾಖಲೆಗಳು, ಸಂವಹನಗಳು ಮತ್ತು ಉಲ್ಲೇಖಗಳಲ್ಲಿ ಹೊಸ ಹೆಸರು ‘ಲೋಕ ಭವನ-ಕರ್ನಾಟಕ’ ಎಂದು ಬಳಸಬೇಕು. ಎಲ್ಲ ಇಲಾಖೆ ಮತ್ತು ಅಧಿಕಾರಿಗಳು ತಮ್ಮ ದಾಖಲೆಗಳು, ಲೆಟರ್‍ಹೆಡ್, ವೆಬ್‍ಸೈಟ್‍ಗಳು ಮತ್ತು ಇತರ ಸಂವಹನಗಳಲ್ಲಿ ಬದಲಾವಣೆಯನ್ನು ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಮರುನಾಮಕರಣಕ್ಕೆ ಕಾರಣವೇನು?:

‘ರಾಜಭವನ’ ಎಂಬುದು ಬ್ರಿಟಿಷ್‌ ಶೈಲಿಯನ್ನು ಪ್ರತಿಬಿಂಬಿಸುತ್ತಿದ್ದು, ರಾಜ್ಯಪಾಲರ ಅಧಿಕಾರ, ವೈಭವ ಮತ್ತು ಆಡಳಿತದ ಶ್ರೀಮಂತಿಕೆಯನ್ನು ಸೂಚಿಸುತ್ತವೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ಭವನಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!