ಬೆಂಗಳೂರು: ವಯನಾಡು ಗುಡ್ಡ ಕುಸಿತ ಪ್ರಕರಣದಲ್ಲಿ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ನಿವಾಸಿಗಳಾದ 50 ವರ್ಷದ ರಾಜೇಂದ್ರ ಮತ್ತು 45 ವರ್ಷದ ರತ್ನಮ್ಮ ಮೃತ ದುರ್ದೈವಿಗಳಾಗಿದ್ದು, ಮೃತದೇಹ ಪತ್ತೆಯಾಗಿಲ್ಲ. 62 ವರ್ಷ ವಯಸ್ಸಿನ ಪುಟ್ಟಸಿದ್ದಿ ಮತ್ತು 50 ವರ್ಷದ ರಾಣಿ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಮತ್ತು ಅವರ ಮೃತದೇಹಗಳು ಪತ್ತೆಯಾಗಿವೆ.
Advertisement
ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರ ಗ್ರಾಮದ ಬೆಳ್ಳಶೆಟ್ಟಿ ಎಂಬವರ ಪುತ್ರ ಸ್ವಾಮಿಶೆಟ್ಟಿ, 70 ವರ್ಷ, ಗಾಯಗೊಂಡಿದ್ದು, ನಂತರ ವೈತ್ರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಾರೆ ಈ ವರೆಗೆ ಚಾಮರಾಜನಗರ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ ಓರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.