ಕೋಲಾರ:– ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಲ್ ಕ್ರಾಸ್ ನಲ್ಲಿ ಪಿಸ್ತೂಲ್ ಲಾಂಗುಗಳು ತೋರಿಸಿ ಒಂಟಿ ಮನೆಯಲ್ಲಿ ಖದೀಮರು ದರೋಡೆ ನಡೆಸಿದ ಘಟನೆ ಜರುಗಿದೆ.
Advertisement
ಸಂತ್ರಸ್ತ ಕುಟುಂಬ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಹೊಂಚು ಹಾಕಿ ಆರೋಪಿಗಳು ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮನೆಯ ಯಜಮಾನ ರೇಷನ್ ತರಲು ಹೋಗಿದ್ದ ವೇಳೆ ಘಟನೆ ಜರುಗಿದೆ. ನಾಲ್ಕು ದರೋಡೆಕೊರರಿಂದ ನಡೆದಿರುವ ಕೃತ್ಯ ಇದಾಗಿದ್ದು, 1 ತಾಳಿ,3 ಜೊತೆ ಓಲೆ,6 ಉಂಗುರ ,1 ನಕ್ಲೆಸ್, 55ಸಾವಿರ ಹಣ ದರೋಡೆ ಮಾಡಲಾಗಿದೆ. ಬುಧವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಘಟನೆ ಜರುಗಿದೆ. ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.