ಗಣೇಶನ ಮೂರ್ತಿ ಕದ್ದೊಯ್ದ ಖದೀಮ: ಬೆಂಗಳೂರಿನಲ್ಲಿ ದೇವರಿಗೂ ಇಲ್ವಾ ಸೇಫ್ಟಿ!?

0
Spread the love

ಬೆಂಗಳೂರು:- ದೇವರ ಮೂರ್ತಿಯನ್ನೇ ಕಳ್ಳರು ಕದ್ದು ಪರಾರಿಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಬ್ಯಾಡರಹಳ್ಳಿ‌ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ಗಣೇಶನ ಮೂರ್ತಿಯನ್ನೇ ಕಳ್ಳರು ಎಗರಿಸಿದ್ದಾರೆ. ಬೈಕ್​ನಲ್ಲಿ ಮಧ್ಯರಾತ್ರಿ‌ ಬಂದ ಕಳ್ಳರು ಗಣೇಶ ‌ಮೂರ್ತಿಯನ್ನು‌ ಕದ್ದು ಹೊತ್ತೊಯ್ದಿದ್ದಾರೆ. ಆ ಮೂಲಕ ಹಬ್ಬದ ಸೀಸನ್​​ನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಅಂಗಡಿಯ ಮಾಲೀಕರು ಗಣೇಶನ ಮೂರ್ತಿಯನ್ನು ಯಾರು ಕಳ್ಳತನ ಮಾಡುತ್ತಾರೆ ಎಂದು ಅಂಗಡಿಯ ಹೊರ ಭಾಗದಲ್ಲಿ ಇಟ್ಟಿದ್ದರು. ಇದನ್ನು ಗಮನಿಸಿದ ಕಳ್ಳರು ಒಂದು ಗಂಟೆ ರಾತ್ರಿ ವೇಳೆ ಗಣೇಶ ಮೂರ್ತಿ ಕದ್ದು ಎಸ್ಕೇಪ್ ಆಗಿದ್ದಾರೆ. ಮೂರ್ತಿ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಸದ್ಯ ಗಣೇಶ ಮೂರ್ತಿ‌ ಕಳ್ಳತನ ಮಾಡಿರುವ ಬಗ್ಗೆ ಬ್ಯಾಡರಹಳ್ಳಿ‌ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here