ದಾವಣೆಗರೆ: ಸರಕಾರ ಒಂದು ಕಡೆ ಕೊಡಬೇಕಾದ ಪಡಿತರಕ್ಕೆ ಕತ್ತರಿ ಹಾಕುತ್ತಿದ್ದರೆ, ದಂಧೆಕೋರರು ಪಡಿತರ ಅಕ್ಕಿಯನ್ನು ಕಾಳಸಂತೆಗೆ ಸಾಗಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದ್ದು, ಅಕ್ರಮಕ್ಕೆ ಕೊನೆ ಇಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಯಾಕಂದ್ರೆ ಕಾನೂನು ಕಾಯಬೇಕಾದ ಪೊಲೀಸ್’ನಿಂದಲೇ ಅಕ್ರಮಕ್ಕೆ ಸಾಥ್ ನೀಡುವುದು ನೋಡಿದ್ರೆ ಶಾಕ್ ಆಗ್ತೀರಾ.. ಹೌದು ಪಡಿತರ ಅಕ್ಕಿ ಕಾಳಸಂತೆಗೆ ಸಾಗಾಟ ಮಾಡುತ್ತಿದ್ದವರ ಬಳಿ ಲಂಚ ಪಡೆದು ದಂಧೆ ಮಾಡಲು ಬಿಡುತ್ತಿದ್ದಾನೆ ಈ ಪೊಲೀಸಪ್ಪ.. ಸಂತೆಬೆನ್ನೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ರವಿ ಲಂಚ ಪಡೆಯುತ್ತಿರುವ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎಸ್ ಬಿ ಕಾನ್ಸ್ಟೇಬಲ್ ಆಗಿ ದಂಧೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸೋ ಬದಲು ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಾನ್ಸ್ಟೇಬಲ್ ರವಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನ ನಿಲ್ಲಿಸಿ ಲಂಚದ ಬೇಡಿಕೆಯಿಡುತ್ತಿದ್ದನು. ಅದಲ್ಲದೆ ಪಡಿತರ ಅಕ್ಕಿ ಕಾಳಸಂತೆಗೆ ಸಾಗಾಟ ಮಾಡುತ್ತಿದ್ದನ್ನು ವಿಡಿಯೋ ಮಾಡಿ ಹೆದರಿಸಿ ಲಂಚ ಪಡೆಯುತ್ತಿದ್ದನು ಈ ಪೊಲೀಸಪ್ಪ.
ಸದ್ಯ ಲಂಚ ಪಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಕ್ರಮ ದಂಧೆಗೆ ಕಡಿವಾಣ ಹಾಕುವ ಬದಲು ಲಂಚ ಪಡೆದು ಸಪೋರ್ಟ್ ಮಾಡುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ವಿರುದ್ದ ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿದೆ.