ದೊಡ್ಮನೆಗೆ ಬಂತು ಕಿಚ್ಚನ ಕೈರುಚಿ: ಬಿಗ್ ಬಾಸ್ʼಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು ಎಂದ ಹನುಮಂತ

0
Spread the love

‘ಬಿಗ್​ ಬಾಸ್ ಕನ್ನಡ ಸೀಸನ್​ 11’ ಆಟ ಕೊನೇ ಹಂತವನ್ನು ತಲುಪುತ್ತಿದೆ. ಯಾರಿಗೆ ಬಿಗ್ ಬಾಸ್ ಟ್ರೋಫಿ ಹಿಡಿಯುವ ಅವಕಾಶ ಸಿಗಲಿದೆ ಎಂಬುದನ್ನು ತಿಳಿಯಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಸೀಸನ್​ನಲ್ಲಿ ರಜತ್ ಅವರು ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಇದೀಗ ಬಿಗ್ ಬಾಸ್ ಮನೆ ಮಂದಿಗೆ ಕಿಚ್ಚನ ಕೈ ರುಚಿ ಸವಿಯುವ ಅವಕಾಶ ಸಿಕ್ಕಿದೆ. ಪ್ರತಿ ಸದಸ್ಯರ ಹೆಸರು ಬರೆದು ಊಟವನ್ನು ಕಳಿಸಲಾಗಿದೆ.

Advertisement

ಕಿಚ್ಚನ ಕೈ ರುಚಿ ಸವಿಯುವುದರ ಜೊತೆಗೆ ಬಿಗ್ ಬಾಸ್ ಮನೆಯ ಸದಸ್ಯರು ಸುದೀಪ್‌ ಅವರ ಬಗ್ಗೆ ಸವಿಯಾದ ಮಾತುಗಳನ್ನಾಡಿದ್ದಾರೆ. ರಜತ್ ಅವರು ಇಂತಹ ಒಂದು ಸರ್‌ಪ್ರೈಸ್, ಇಂತಹ ಒಂದು ಸಮಯ ಕ್ರಿಯೇಟ್ ಮಾಡೋದು ನಿಮ್ಮ ಕೈಯಲ್ಲಿ ಮಾತ್ರ ಸಾಧ್ಯವಾಗುತ್ತೆ ಸಾರ್ ಎಂದಿದ್ದಾರೆ.

ಪ್ರತಿಯೊಬ್ಬರು ಥ್ಯಾಂಕ್ಯು ಸುದೀಪ್ ಸಾರ್.. ಸೋ ಸ್ವೀಟ್.. ಥ್ಯಾಂಕ್ಯು ಸೋ ಮಚ್ ಅಣ್ಣ ಸುದೀಪ್ ಸಾರ್ ಥ್ಯಾಂಕ್ಯು, ಥ್ಯಾಂಕ್ಯು ಎಂದು ಹೇಳಿದ್ದಾರೆ. ಚೈತ್ರಾ ಕುಂದಾಪುರ ಅವರು ನಿಮ್ಮ ಕೈಯಿಂದ ನನ್ನ ಹೆಸರನ್ನು ಬರೆಸಿಕೊಳ್ಳೋದು ಭಾಗ್ಯ ಎಂದು ಭಾವುಕರಾಗಿದ್ದಾರೆ. ಹನುಮಂತ ಅವರಂತೂ ಯಾವ ಜನ್ಮದ ಪುಣ್ಯ, ಬಿಗ್ ಬಾಸ್ ಮನೆಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here