ಕೋಲಾರ: ಹಣಕ್ಕಾಗಿ ಇಬ್ಬರ ಜಗಳ, ಗಲಾಟೆ ನಿಲ್ಲಿಸಲು ಹೋದ ಮೂರನೇ ವ್ಯಕ್ತಿ ಕೊಲೆ!

0
Spread the love

ಕೋಲಾರ: ಹಣಕ್ಕಾಗಿ ಇಬ್ಬರ ಜಗಳ ನಡೆದಿದ್ದು, ಗಲಾಟೆ ತಡೆಯಲು ಹೋದ ಮೂರನೇ ವ್ಯಕ್ತಿ ಕೊಲೆಯಾಗಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಪಲ್ಲಿ ಗ್ರಾಮದಲ್ಲಿ ಜರುಗಿದೆ.

Advertisement

ಗುಂತವಾರಪಲ್ಲಿ ಗ್ರಾಮದ ನಿವಾಸಿಯಾಗಿರುವ 45 ವರ್ಷದ ಮಂಜುನಾಥ್ ಕೊಲೆಯಾದ ದುರ್ದೈವಿ. ಕೂಲಗುರ್ಕಿ ಗ್ರಾಮದ ಶ್ರೀಮೂರ್ತಿ ಎಂಬುವರಿಂದ ಈ ಕೊಲೆ ನಡೆದಿದೆ. ಸೋಮಯಾಜಲಪಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿಯೇ ಈ ಕೊಲೆ ನಡೆದಿದ್ದು, ಮೃತನ ಸಂಬಂಧಿಕರಿಂದ ಆರೋಪಿ ಮನೆಗೆ ಬೆಂಕಿ ಹಚ್ಚಲಾಗಿದೆ.

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದ್ದು, ಸ್ಥಳಕ್ಕೆ ಕೋಲಾರ ಎಸ್ ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here