ಕೊಪ್ಪಳ:- ಸ್ಪೀರಿಟ್ ಕುಡಿದು ಯುವಕರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಯಲ್ಲಿ ಜರುಗಿದೆ.
ಕೂಕನಪಳ್ಳಿ ನಿವಾಸಿಗಳಾದ ರಮೇಶ ಹೊಸಳ್ಳಿ, ಅಮರಯ್ಯ ಹಿರೇಮಠ ಮೃತ ಯುವಕರು. ಮೃತರು, ಫೆ 4 ರಂದು ಜಮೀನಿನಲ್ಲಿ ಪಾರ್ಟಿ ಮಾಡಲು ಹೋಗಿದ್ದರು. ಯುವಕರಿಗೆ ಸರಾಯಿ ಎಂದು ಮಾರುತಿ ಹಾಗು ಶರಣಪ್ಪ ಗುರಿಕಾರ ಎಂಬುವವರು ಸ್ಪೀರಿಟ್ ನೀಡಿದರು. ಸ್ಪೀರಿಟ್ ಕುಡಿದ ಬಳಿಕ ರಮೇಶ, ಶರಣಪ್ಪ ಹಂಚಿನಾಳ, ಆಮರಯ್ಯ ಹಿರೇಮಠ ಅಸ್ವಸ್ಥರಾಗಿ ಬಿದ್ದಿದ್ದಾರೆ. ಕೂಡಲೇ ಅವರುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ರಮೇಶ ನಿನ್ನೆ ಮೃತಪಟ್ರೆ, ಇಂದು ಹುಬ್ಬಳ್ಳಿಯಲ್ಲಿ ಅಮರಯ್ಯ ಹಿರೇಮಠ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಮೃತ ರಮೇಶ ತಂದೆಯಿಂದ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.



