ವಿಜಯಸಾಕ್ಷಿ ಸುದ್ದಿ, ಗದಗ : ಸತತ ೫ನೇ ಬಾರಿಗೆ ಬೆಂಗಳೂರು ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪುಟ್ಟಣ್ಣ ಅವರು ಶಿಕ್ಷಕರ ಮನ ಗೆದ್ದ ಶಿಕ್ಷಕರ ರಕ್ಷಕ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಆರ್.ಕಲ್ಮನಿ ಹೇಳಿದರು.
Advertisement
ಬೆಂಗಳೂರಿನಲ್ಲಿರುವ ಪುಟ್ಟಣ್ಣರವರ ಗೃಹ ಕಚೇರಿಗೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನಿಯೋಗ ತೆರಳಿ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಡಾ. ವಿನೋದಚೆಂದ ಪೀಟರ್, ಧಾರವಾಡ ಜಿಲ್ಲಾಧ್ಯಕ್ಷ ಸಿ.ಎಂ. ಕಲಕೇರಿ, ಕೆ.ಎನ್. ಪ್ರವೀಣ, ಎನ್.ಎಂ.ಕುಮಾರ್, ಮಹೇಶ್ ಬಿ.ಹೆಬ್ಬಾಳಕುಮಾರ್ ಸೇರಿದಂತೆ ಅತಿಥಿ ಉಪನ್ಯಾಸಕರ ಪ್ರಮುಖರು ಉಪಸ್ಥಿತರಿದ್ದರು.