ಬೆಂಗಳೂರು: ಎಷ್ಟೇ ಒಳ್ಳೆಯದು ಮಾಡಿದ್ರೂ ಕುಮಾರಸ್ವಾಮಿ ನನ್ನ ಸರ್ವನಾಶವನ್ನೇ ಬಯಸಿಕೊಂಡು ಬಂದಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಷ್ಟೇ ಒಳ್ಳೆಯದು ಮಾಡಿದ್ರೂ ನನ್ನ ಸರ್ವನಾಶವನ್ನೇ ಬಯಸುತ್ತಾರೆ. ಕುಮಾರಸ್ವಾಮಿ ನನ್ನ ಸರ್ವನಾಶವನ್ನೇ ಬಯಸಿಕೊಂಡು ಬಂದಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಯವರ ಆಚಾರ, ವಿಚಾರ ಎಲ್ಲವೂ ಗೊತ್ತಿದೆ. ರಾಮನಗರವನ್ನು ನಾವು ಟಚ್ ಮಾಡ್ತಿಲ್ಲ, ಅದು ಅಲ್ಲೇ ಇರಲಿದೆ. ಅವರು ರಾಮನಗರಕ್ಕೆ ಬಂದು ಅಕ್ರಮ ಮಾಡಲು ಪ್ರಯತ್ನ ಮಾಡಿದ್ರು.
ರಾಮನಗರ, ಚನ್ನಪಟ್ಟಣ, ಮಾಗಡಿ ಎಲ್ಲರೂ ನಮ್ಮವರು. ಕೆಂಗಲ್ ಹನುಮಂತಯ್ಯ ಬೆಂಗಳೂರಿಗೆ ಬಂದು ವಿಧಾನಸೌಧ ಕಟ್ಟಿದ್ರು. ದೇವೇಗೌಡರು, ಕುಮಾರಸ್ವಾಮಿ ಕೂಡ ಬೆಂಗಳೂರಿಗೆ ಬಂದರು. ನಮ್ಮ ಹಿರಿಯರು ಇಟ್ಟಿದ್ದ ಹೆಸರು ಇರಬೇಕು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹೆಸರಿಡಲಾಗಿದೆ. 2028ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುತ್ತೆ. ಬರೆದಿಟ್ಟುಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.