ವಿದ್ಯುತ್ ಕೊರತೆ: ನಾಟಲು ತಂದಿಟ್ಟಿದ್ದ ಸಾವಿರಾರು ಬೆಲೆಯ ಉಳ್ಳಾಗಡ್ಡಿ ಸಸಿಗಳು ನಾಶ

0
Spread the love

ಕಲಬುರಗಿ: ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ರೈತ ನಾಟಲು ತಂದಿಟ್ಟಿದ್ದ ಸಾವಿರಾರು ಬೆಲೆಯ ಉಳ್ಳಾಗಡ್ಡಿ ಸಸಿಗಳು ಹಾಳಾದ ಘಟನೆ ಕಲಬುರಗಿಯ ಜಂಬಗಾ ಗ್ರಾಮದಲ್ಲಿ ನಡೆದಿದೆ.

Advertisement

ರೈತ ಗಿರೆಪ್ಪಗೌಡ ತನ್ನ ತೋಟದಲ್ಲಿ ನಾಟಿ ಮಾಡಲು ಎರಡು ಸಾವಿರ ಈರುಳ್ಳಿ ಸಸಿ ತಂದಿದ್ದ.. ಆದ್ರೆ ನಾಟಲು ನೀರಿರಬೇಕು ನೀರು ಹರಿಸಬೇಕು ಅಂದ್ರೆ ಕರೆಂಟ್ ಇರಬೇಕು.

ಆದ್ರೆ ರೈತರ ಪಂಪಸೆಟ್ ಗಳಿಗೆ ಸರ್ಕಾರ ರಾತ್ರಿಯಲ್ಲಿ ವಿದ್ಯುತ್ ಸರಬರಾಜು ಮಾಡ್ತಿದೆ.

ರಾತ್ರಿ ತೋಟಕ್ಕೆ ಹೋಗಲು ವಿಷಜಂತುಗಳು ಹಾಗು ಕಾಡುಪ್ರಾಣಿಗಳ ಕಾಟ.. ಹೀಗಾಗಿ ಹಗಲು ಕರೆಂಟ್ ಕೊಟ್ಟರೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಎನ್ನುತ್ತೆ ರೈತ ಬಳಗ.. ಇವೆಲ್ಲ ಕಾರಣಕ್ಕೆ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಸಸಿ ನಾಟುವ ಮುನ್ನವೇ ಒಣಗಿದೆ ಎನ್ನಲಾಗ್ತಿದೆ…


Spread the love

LEAVE A REPLY

Please enter your comment!
Please enter your name here