ಗಂಡನಿಂದ ಬರ್ಭರವಾಗಿ ಕೊಲೆಯಾಗಬೇಕಿದ್ದ ಮಹಿಳೆಯ ಜೀವ ಉಳಿಸಿದ ಲೇಡಿ ಸಿಂಗಂ ತುಂಗಾ 2!

0
Spread the love

ದಾವಣಗೆರೆ: ಗಂಡನಿಂದ ಬರ್ಭರವಾಗಿ ಕೊಲೆಯಾಗಬೇಕಿದ್ದ ಮಹಿಳೆಯ ಜೀವವನ್ನು ಚಾಣಾಕ್ಷ ಬುದ್ದಿಯಿಂದ ಲೇಡಿ ಸಿಂಗಂ ತುಂಗಾ2 ಪ್ರಾಣ ಉಳಿಸಿದೆ.

Advertisement

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಪರ ಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯನ್ನು ಕೊಲೆ ಮಾಡಲು ಆರೋಪಿ ಬಂದಿದ್ದನು.

ಇದಕ್ಕೂ ಮೊದಲು ಕಳೆದ ರಾತ್ರಿ 9 ಗಂಟೆಗೆ ಸುಮಾರಿಗೆ ಸಂತೆಬೆನ್ನೂರು ಗ್ರಾಮದ ಬಾಡ ರಸ್ತೆಯಲ್ಲಿ ಆಕೆಯ ಪ್ರಿಯಕರನನ್ನು ಕೊಂದಿದ್ದನು. ಸಂತೆಬೆನ್ನೂರಿನ ನಿವಾಸಿ ಸಂತೋಷ್ ಕೊಲೆಯಾಗಿದ್ದ ಯುವಕನಾಗಿದ್ದು, ರಂಗಸ್ವಾಮಿ ಎನ್ನುವನ ಪತ್ನಿ ರೂಪ ಜೊತೆ ಅನೈತಿಕ ಸಂಬಂಧ ಸಂತೋಷ್ ಹೊಂದಿದ್ದನು.

ವಿಷಯ ತಿಳಿದು ಸಂತೋಷ್ ನನ್ನು ಅಡಿಕೆ ಸುಲಿಯುವ ಆಯುಧದಿಂದ ಬರ್ಭರ ಹತ್ಯೆ ಮಾಡಿದ್ದನು. ಸಂತೋಷ ಕೊಲೆ ಮಾಡಿದ ಬಳಿಕ ಚನ್ನಾಪುರದಲ್ಲಿರುವ ಪತ್ನಿ ರೂಪಳನ್ನು ಕೊಲೆ ಮಾಡಲು ಹೊರಟಿದ್ದನು.

ಕೊಲೆಯಾದ ಕೆಲವೇ ಕ್ಷಣದಲ್ಲಿ ತುಂಗಾ -2 ಳನ್ನು ಕರೆತಂದಿದ್ದ ಪೊಲೀಸರು, ಪೊಲೀಸ್ ಡಾಗ್ ತುಂಗಾ-2 ಆರೋಪಿಯ ವಾಸನೆ ಹಿಡಿದು ಮಳೆಯಲ್ಲಿ 8 ಕಿಲೋಮೀಟರ್ ಕ್ರಮಿಸಿದೆ.

ಕೋಪದಿಂದ ಪತ್ನಿ ರೂಪಾಳ‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದ ರಂಗಸ್ವಾಮಿ, ಪೊಲೀಸ್ ಶ್ವಾನ ತುಂಗಾ 2 ಕೊಲೆ ಮಾಡುವುದರೊಳಗೆ ರಂಗಸ್ವಾಮಿ ಮನೆ ಸೇರಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಇನ್ನೂ ತುಂಗಾ -2 ಕಾರ್ಯಕ್ಕೆ ಜಿಲ್ಲಾ ಎಸ್ ಪಿ ಉಮಾ ಪ್ರಶಾಂತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here