ರಾಜ್ಯ ಮಹಿಳಾ ಕಾರ್ಯದರ್ಶಿಯಾಗಿ ಲಕ್ಷ್ಮೀ ಕಾಶಿಮಠ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಶ್ರೀ ಡಾ. ಪಂ. ಪುಟ್ಟರಾಜ ರೈತ ಸಂಘ ಗದಗ ಕಾರ್ಯಾಲಯದಲ್ಲಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಮ್.ಪಿ. ಮುಳಗುಂದ ಅವರ ಆದೇಶದ ಮೇರೆಗೆ ರಾಜ್ಯ ಮಹಿಳಾ ಕಾರ್ಯದರ್ಶಿಯಾಗಿ ಲಕ್ಷ್ಮೀ ಕಾಶಿಮಠ ಅವರನ್ನು ನೇಮಕಗೊಳಿಸಲಾಯಿತು.

Advertisement

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗದಗ ಜಿಲ್ಲಾಧ್ಯಕ್ಷ ಶಂಕರಗೌಡ ಎಮ್.ಜಯನಗೌಡ್ರ, ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ದಾವಲಸಾಬ ನಾಗನೂರ, ರಾಜ್ಯ ಯುವ ಘಟಕಾಧ್ಯಕ್ಷ ಸಿರಾಜ ಲಕ್ಕುಂಡಿ, ಗದಗ ಜಿಲ್ಲಾ ಕಾರ್ಯದರ್ಶಿ ಬಸಯ್ಯ ಟಿ.ಮುಧೋಳಮಠ, ಪ್ರಮುಖರಾದ ಕವಿತಾ ಗುಡದೂರ, ರೇಖಾ ಅರಮನಿ, ಮನೋಹರ ಕಾರ್ಗಿ, ಗೀತಾ ಮುತ್ತಪ್ಪನವರ, ಮಂಜು, ಮೌನೇಶ ಮೈಲಾರಿ ಹಾಗೂ ಸಂಘದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here