ಕೋಲಾರ:- ಎರಡು ಗುಂಟೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಸದಸ್ಯರ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೋಲಾರದ ದೊಡ್ಡ ಹಸಾಳ ಗ್ರಾಮದಲ್ಲಿ ಜರುಗಿದೆ.
Advertisement
ಗ್ರಾಮದ ಅಶೋಕ ಮತ್ತು ಉಷಾ ಎಂಬುವರ ನಡುವೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಕಳೆದ ಏಳು ವರ್ಷದಿಂದ ಕೋರ್ಟ್ ನಲ್ಲಿ ಈ ವಿವಾದ ಇದ್ದು, ಇದೇ ವಿಚಾರಕ್ಕೆ ಇದೀಗ ಅಶೋಕ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನ್ಯಾಯಾಲಯ ಆದೇಶದಂತೆ ಜಮೀನಿನಲ್ಲಿ ಜೆಸಿಬಿಯಲ್ಲಿ ಕೆಲಸ ಮಾಡಲು ಅಶೋಕ್ ಮುಂದಾಗಿದ್ದ. ಈ ವೇಳೆ ಉಷಾ ಎಂಬುವರ ಕುಟುಂಬದ ಗಗನ್ ಮತ್ತು ನಿಸಾನ್ ಎಂಬುವರಿಂದ ಹಲ್ಲೆ ನಡೆದಿದೆ.
ಹಲ್ಲೆ ನಡೆದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.