ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನವೊಂದು ತಪಸ್ಸಿನಂತೆ. ಶಿಕ್ಷಣ ಅಥವಾ ಕಲಿಕೆ ತಪಸ್ಸಿನಷ್ಟೇ ಕಷ್ಟ. ಅದನ್ನು ಸಮಯೋಚಿತವಾಗಿ ಪಡೆದುಕೊಂಡಲ್ಲಿ ವಿದ್ಯಾರ್ಥಿಗಳ ಮುಂದಿನ ಬದುಕು ಉತ್ತರೋತ್ತರವಾಗಿ ಅಭಿವೃದ್ಧಿಯಾಗುತ್ತದೆ. ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಶ್ರಮವಹಿಸಿ ಈ ಭಾಗದಲ್ಲಿ ಇಂಜಿನೀಯರಿಂಗ್ ಮಹಾವಿದ್ಯಾಲಯ ನಿರ್ಮಿಸಿದ್ದು, ಈ ಭಾಗದ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು ನುಡಿದರು.
ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ `ತೋಂಟದೋತ್ಸವ-2025’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎಂ. ಅವಟಿ ವಹಿಸಿಕೊಂಡಿದ್ದರು. ಸ್ಮೇಹಸಮ್ಮೇಳನದ ಸಂಚಾಲಕರಾದ ಪ್ರೊ. ವಿಜಯಕುಮಾರ ಎಸ್.ಎಮ್ ಮತ್ತು ಡಾ. ರಮೇಶ ಬಡಿಗೇರ ಉಪಸ್ಥಿತರಿದ್ದರು.
ಪಿಎಚ್ಡಿ ಪಡೆದುಕೊಂಡ ಮಹಾವಿದ್ಯಾಲಯದ ಸಿಬ್ಬಂದಿಗಳಾದ ಡಾ. ಎಸ್.ಎಸ್. ಖಾಜಿ, ಡಾ. ಮಲ್ಲಿಕಾರ್ಜುನ ಜಿ.ಡಿ, ಡಾ. ಎಮ್.ಆರ್. ಅಳವಂಡಿ, ಡಾ. ಪ್ರಕಾಶ ಮರಕುಂಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೊ. ಪ್ರಸನ್ನ ನಾಡಗೌಡರ ಮತ್ತು ಪ್ರೊ. ಮಹಾಂತ ಕಟ್ಟಿಮನಿಯವರು ತಾಂತ್ರಿಕ ಸಂಚಾಲಕರೆಂದು ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ವಿಶೇಷ ಕಾರ್ಯಕ್ರಮವೊಂದರಲ್ಲಿ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳ ತಾಯಂದಿರನ್ನು ಸನ್ಮಾನಿಸುವ ಕಾರ್ಯಕ್ರಮದ ನಿಮಿತ್ತ ಸಾಂಕೇತಿಕವಾಗಿ ಸುಜಾತ ಅಶೋಕ ಬೆಟಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಡಾ. ರಾಜೇಂದ್ರ ಖಡಿ ಮತ್ತು ಡಾ. ರಶ್ಮಿ ಅಂಗಡಿ ನಡೆಸಿಕೊಟ್ಟರು.
ನಯನಾ ಅಳವಂಡಿ ಮತ್ತು ಮೇಳಯಂಕಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದರು. ವಿದ್ಯಾರ್ಥಿಗಳಾದ ಮಾನ್ಯ ಶೆಟ್ಟಿ, ವರ್ಷಾ ಮಹೇಂದ್ರಕರ ನಿರೂಪಿಸಿದರು. ಸೋನಿಯಾ ಹುಬ್ಬಳ್ಳಿ ಸ್ವಾಗತ ಗೀತೆ ಹಾಡಿದರು. ಫಜಲ್, ಶ್ರೇಯಸ್ ಪಳಿನಿ, ರಾಘವೇಂದ್ರ, ಸಂಜನಾ, ನೀಲಗಂಗಾ, ದಾನೇಶ್ವರಿ ನಿರೂಪಿಸಿದರು.