ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನಾಗಾವಿ ಗ್ರಾಮದ ಕನ್ನೂರ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಶರಣಬಸವೇಶ್ವರ ಪುರಾಣ ಸಮಿತಿ ವತಿಯಿಂದ ಕಳೆದ 44 ವರ್ಷಗಳಿಂದ ಸಾಗಿ ಬಂದಿರುವ ಕಲಬುರ್ಗಿ ಶ್ರೀಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಆಗಸ್ಟ್ 11ರಂದು ರಾತ್ರಿ 8 ಗಂಟೆಗೆ ವಿಜಯಪುರದ ಆಧ್ಯಾತ್ಮಿಕ ಚಿಂತಕಿ ಐಶ್ವರ್ಯ ಪವನಕುಮಾರ ಪತ್ತಾರ ಅವರು ವಿಶೇಷ ಪ್ರವಚನ ನೀಡಲಿದ್ದಾರೆ.
Advertisement
ವೇ.ಮೂ ಮೃತ್ಯುಂಜಯ ಸ್ವಾಮೀಜಿ ಹಿರೇಮಠ ಪುರಾಣ ಪಠಿಸುವರು. ವೇ.ಮೂ ಮಂಜಯ್ಯ ಶಾಸ್ತಿçಗಳು ಹಿರೇಹಾಳ ಪ್ರವಚನ ನೀಡುವರು. ವೀರೇಶ್ವರ ಪುಣ್ಯಾಶ್ರಮ ದಾವಣಗೆರೆಯ ಕಲಾವಿದರಾದ ಬಸವರಾಜ ಎಸ್.ಹೊಂಬಳ, ರಾಜಶೇಖರ್ ಎಸ್.ಸಂಗಳಕರ ಹುಬ್ಬಳ್ಳಿ ಇವರು ಸಂಗೀತ ಸೇವೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.