ನೆಲಮಂಗಲದಲ್ಲಿ ಚಿರತೆ ಉಪಟಳ: ಆತಂಕಗೊಂಡ ಸ್ಥಳೀಯರು

0
Spread the love

ನೆಲಮಂಗಲ: ನೆಲಮಂಗಲ ತಾಲೂಕಿನಲ್ಲಿ ಚಿರತೆ ಉಪಟಳ ಜೋರಾಗಿದೆ.

Advertisement

ತಾಲೂಕಿನ ದಾಸೇನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಸಾಕು ನಾಯಿಯನ್ನ ಹೊತ್ತೊಯ್ಯಲು ಅಟ್ಟಾಡಿಸಿಕೊಂಡು ಹೋದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ದಾಸೇನಹಳ್ಳಿ ಗ್ರಾಮದ ಮಾಸ್ಟರ್ ಜಗಣ್ಣ ಎಂಬುವರಿಗೆ ಸೇರಿದ ಮನೆ ಸಮೀಪದಲ್ಲಿ ಈ ದೃಶ್ಯ ಕಂಡು ಬಂದಿದೆ. ಚಿರತೆ ಚಲನವಲನದ ದೃಶ್ಯ ಕಂಡ ಗ್ರಾಮಸ್ಥರಲ್ಲಿ ಆತಂಕ ಮನೆ‌ ಮಾಡಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here