ಮನುಷ್ಯನ ಭಾವನೆಗಳು ಪರಿಶುದ್ಧವಾಗಿರಲಿ: ಡಾ. ಸುಜ್ಞಾನದೇವ ಶಿವಾಚಾರ್ಯರು

0
Spread the love

ವಿಜಯಸಾಕ್ಷಿ ಸುದ್ದಿ,ಲಕ್ಮೇಶ್ವರ: ಪವಿತ್ರವಾದ ಕಾರ್ತಿಕ ಮಾಸದಲ್ಲಿ ಶೃದ್ಧಾ-ಭಕ್ತಿಯಿಂದ ಬೆಳಗಿಸುವ ದೀಪ ಮನುಷ್ಯದ ಅಜ್ಞಾನದ ಕತ್ತಲೆ, ಪಾಪ ಕಳೆದು ಸುಜ್ಞಾನದ ಬೆಳಕು ಮೂಡಿಸುತ್ತದೆ ಎಂದು ಬನ್ನಿಕೊಪ್ಪ/ಮೈಸೂರಿನ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ಹೇಳಿದರು.

Advertisement

ಅವರು ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಗಡ್ಡಯ್ಯಸ್ವಾಮಿ ಮಠದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಮತ್ತು ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಯಾವುದೇ ಜಾತಿ, ಧರ್ಮ, ಮೇಲು-ಕೀಳೆಂಬ ಭೇದವಿಲ್ಲದ ದೀಪದ ಬೆಳಕಿನಂತೆ ಮನುಷ್ಯನ ಭಾವನೆಗಳು ಪರಿಶುದ್ಧವಾಗಿರಲಿ. ದೀಪ ಎಲ್ಲರನ್ನೂ ಒಗ್ಗೂಡಿಸುವ, ಬಾಂಧವ್ಯ ಬೆಸೆಯುವ ಚೈತನ್ಯಶಕ್ತಿ ಹೊಂದಿದೆ. ಬದುಕಿನಲ್ಲಿ ಪರಿವರ್ತನಾಶೀಲತೆಯನ್ನು ತರುವ ಕಾರ್ತಿಕ ಮಾಸದ ದೀಪದಿಂದ ಮನುಷ್ಯನಲ್ಲಿನ ಅರಿಷಡ್ವರ್ಗಗಳನ್ನು ಕಳೆದು ಸಂಸ್ಕಾರ ಮೂಡಿಸಿ ಸನ್ಮಾರ್ಗ ಲಭಿಸುತ್ತದೆ. ದೇಗುಲ-ಮಠಗಳು ಮನುಷ್ಯರ ಬದುಕಿಗೆ ಆಚಾರ-ವಿಚಾರ ಸಂಸ್ಕಾರ, ಸನ್ಮಾರ್ಗದ ದಾರಿ ತೋರುತ್ತವೆ. ಹಿರಿಯರು ತೋರಿದ ಸತ್ಪರಂಪರೆ, ಆಚರಣೆಗಳನ್ನು ಪಾಲಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿರುವ ಶ್ರೀಮಠವು ಈ ಭಾಗದ ಜನರ ಶೃದ್ಧಾ-ಭಕ್ತಿ ಕೇಂದ್ರವಾಗಿದೆ ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಪ್ರಾಸ್ತಾವಿಕ ನುಡಿದರು. ಶ್ರೀಮಠದ ವಂಶಸ್ಥರು-ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸಿದ್ದರು. ಕೊತಬಾಳದ ರಾಚಯ್ಯ ಹಿರೇಮಠ ಹಾಗೂ ಹರ್ಲಾಪುರ ಸಾಂಬಯ್ಯ ಹಿರೇಮಠ ಅವರ ಕಲಾ ತಂಡದಿಂದ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಕಾರ್ಯಕ್ರಮ ನಡೆಯಿತು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ(ಹೆಸ್ಕಾಂ)ನಿಯಮಿತ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಶಾಸಕರಾದ ಜಿ.ಎಸ್. ಪಾಟೀಲ್, ನಾಶೀರಖಾನ ಪಠಾಣ, ಶ್ರೀನಿವಾಸ ಮಾನೆ, ಮಾಜಿ ಶಾಸಕ ರಾಮಣ್ಣ ಲಮಾಣಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಲಿಂಬಯ್ಯಸ್ವಾಮಿ ಪ್ರತಿಷ್ಠಾನದ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಎಸ್.ಪಿ. ಬಳಿಗಾರ, ವಿರೂಪಾಕ್ಷಪ್ಪ ಪಡಗೇರಿ, ಗುರುನಾಥ ದಾನಪ್ಪನವರ, ಗೀತಾ ಭೀರಣ್ಣವರ, ಈರಪ್ಪ ಲಮಾಣಿ, ಲಕ್ಷ್ಮಮಣಗೌಡ ಪಾಟೀಲ, ಈರಣ್ಣ ಅಂಗಡಿ, ಅಜ್ಜು ಗಡ್ಡದೇವರಮಠ, ಮಹೇಶ ಲಿಂಬಯ್ಯಸ್ವಾಮಿಮಠ ಸೇರಿ ಮಠದ ಭಕ್ತರು ಪಾಲ್ಗೊಂಡಿದ್ದರು.

ಆನAದ ಗಡ್ಡದೇವರಮಠ, ಸೋಮಶೇಖರ ಕೆರಿಮನಿ, ಈಶ್ವರ ಮೆಡ್ಲೇರಿ, ಶಿವಯೋಗಿ ಗಡ್ಡದೇವರಮಠ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here