ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿಗೆ ಪೂಜೆ ಹಾಗೂ ಕನ್ನಡದ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು.
ಗದುಗಿನ ಗಾಂಧಿ ವೃತದಲ್ಲಿ ಕನ್ನಡದ ಧ್ವಜಾರೋಹಣವನ್ನು ನೆರವೇರಿಸಿದ ಹನಮಂತಪ್ಪ ಹೆಚ್. ಅಬ್ಬಿಗೇರಿ ಮಾತನಾಡಿ, ಗದಗ ಜಿಲ್ಲೆಯ ಕಪ್ಪತಗುಡ್ಡವು ಸುಮಾರು 80 ಸಾವಿರ ಎಕರೆ ಸಂರಕ್ಷಿತ ಅರಣ್ಯ ಪ್ರದೇಶವಾಗಬೇಕು. ಮುಂದಿನ ನಾಗರಿಕರಾಗುವ ಇಂದು ಶಾಲಾ, ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಅಭಿಮಾನ ಮೂಡಿಸುವ ಕೆಲಸವಾಗಬೇಕಾಗಿದೆ. ಅದಕ್ಕಾಗಿ ಶಾಲಾ–ಕಾಲೇಜುಗಳಲ್ಲಿ ಕನ್ನಡ ಭಾಷೆಯ ಬಗ್ಗೆ ತಿಳುವಳಿಕೆ ಮೂಡಿಸುವ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ಸರ್ಕಾರ, ಕನ್ನಡದ ಸಾಹಿತಿಗಳು, ಕಲಾವಿದರು, ಕನ್ನಡ ಪರ ಚಿಂತಕರಿಂದ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮುತ್ತಣ್ಣ ಚೌಡಣ್ಣವರ, ಬಸವರಾಜ್ ಮೇಟಿ, ಲಕ್ಷ್ಮೀ ಮುತ್ತಲಮನೆ, ನಿಂಗನಗೌಡ, ಮಾರುತಿ ಎಂಗ್ಲೆ, ಕುಮಾರ್ ರೇವಣ್ಣವರ್, ಎಂ. ಎಂ. ತಹಸೀಲ್ದಾರ್, ರವಿ ಮಲ್ನಾಡ, ಯಶೋಧ ಬಾಲಾಜಿ, ಗಂಗಮ್ಮ, ಶುಭ ಕಲಾಲ್, ಹುಸೇನ, ಸಲೀಂ ಬೋದ್ಲೆಖಾನ್ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.


