ಮೈಸೂರು: ಸಿಎಂ ಅವರೇ ಮಸೀದಿ ಓಪನ್ ಮಾಡಿಸಿ ನೋಡಿ, ಆಮೇಲೆ ಮುಂದಿನದ್ದು ಹೇಳ್ತಿನಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲ್ ಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕ್ಯಾತಮಾರನಹಳ್ಳಿ ವಿವಾದಿತ ಮಸೀದಿಯ ಬಾಗಿಲು ತೆಗೆಸಲು ರಾಜ್ಯ ಸರ್ಕಾರ ಯತ್ನಿಸಿದೆ. ಅನಧಿಕೃತ ಮಸೀದಿಯನ್ನು ಮತ್ತೆ ಆರಂಭಿಸಲು ಪ್ರಯತ್ನ ಶುರುವಾಗಿದೆ.
Advertisement
ತಾಲಿಬಾನಿ ಸರ್ಕಾರ ಇರುವ ಕಾರಣ ಇಂತಹ ಪ್ರಯತ್ನವನ್ನು ಮುಸ್ಲಿಂ ಮುಖಂಡರು ಆರಂಭಿಸಿದ್ದಾರೆ. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಮಸೀದಿ ತೆರೆಯಲು ಬಿಡಲ್ಲ. ಸಿಎಂ ಅವರೇ ಮಸೀದಿ ಓಪನ್ ಮಾಡಿಸಿ ನೋಡಿ, ಆಮೇಲೆ ಮುಂದಿನದ್ದು ಹೇಳ್ತಿನಿ ಎಂದು ಸವಾಲ್ ಹಾಕಿದ್ದಾರೆ.
ಡಿಸಿಎಂ ನಟ್ಟು-ಬೋಲ್ಟು ಹೇಳಿಕೆ ವಿಚಾರವಾಗಿ ಮಾತನಾಡಿ, ಸಿಎಂ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ. ಡಿಸಿಎಂ ಗೂಂಡಾ ಸರ್ಕಾರ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ಕರ್ನಾಟಕ ಏನೂ ನಿಮ್ಮ ರಿಯಲ್ ಎಸ್ಟೇಟ್ ಆಫೀಸಾ ಪ್ರಶ್ನಿಸಿದ್ದಾರೆ.