ಸಮಾಜಮುಖಿ ಕಾರ್ಯಗಳು ನಿರಂತರವಾಗಿರಲಿ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಸಂಘಟನೆಗಳಿಂದ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಸಾಗಬೇಕು. ಅಂದಾಗ ಮಾತ್ರ ದೇವಮಾನವರ ಜನ್ಮ ದಿನಾಚರಣೆಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.

Advertisement

ಅವರು ಶನಿವಾರ ಸಂಜೆ ಪ್ರವಾದಿ ಹಜರತ್ ಮುಹಮ್ಮದ ಪೈಗಂಬರವರ ಜನ್ಮದಿನಾಚರಣೆ ನಿಮಿತ್ತ ಆಝಾದ ಯುವಕ ಸಂಘ ಹಾಗೂ ತಲಾಬಕಟ್ಟಾ ಮಕಾನ ಕಮೀಟಿಯವರ ಆಶ್ರಯದಲ್ಲಿ ಜರುಗುತ್ತಿರುವ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ 25ನೇ ವರ್ಷದ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಸಂಘಟನೆಗಳು ಜನ್ಮತಾಳಿದ ತಕ್ಷಣ ಮರೆಯಾಗುತ್ತವೆ. ಆದರೆ ರೋಣದ ಆಝಾದ ಸಂಘಟನೆಯವರು ನಿರಂತರವಾಗಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವುದು ಸ್ವಾಗತರ್ಹವಾಗಿದೆ. ಅಲ್ಲದೆ 25 ವರ್ಷಗಳಿಂದ ಸಂಘಟನೆಯನ್ನು ರೋಣ ಪಟ್ಟಣದ ಸಾರ್ವಜನಿಕರ ಸಹಕಾರ ಪಡೆದುಕೊಂಡು ಬೆಳಸಿರುವುದು ಶ್ಲಾಘನೀಯವಾಗಿದ್ದು, ಇನ್ನೂ ಹೆಚ್ಚಿನ ಒಳ್ಳೆಯ ಕೆಲಸಗಳು ನಡೆಯುವ ಮೂಲಕ ಪಟ್ಟಣದ ಕಿರ್ತಿಯನ್ನು ಹೆಚ್ಚಿಸಲಿ ಎಂದರು.

ಅದ್ಯಕ್ಷ ಶಪೀಕ ಮೂಗನೂರ ಪ್ರಾಸ್ತವಿಕವಾಗಿ ಮಾತನಾಡಿದರು. ಸಾನ್ನಿಧ್ಯವನ್ನು ಗುರುಪಾದ ದೇವರು, ನೇತೃತ್ವವನ್ನು ಹಜರತ್ ಸುಲೇಮಾನ ಶಾವಲಿ ಅಜ್ಜನವರು ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಯೂಸುಪ್ ಇಟಗಿ, ಕೆ.ಬಿ. ಹರ್ಲಾಪೂರ, ಗದಿಗೇಪ್ಪ ಕಿರೇಸೂರ, ಸಂಗಪ್ಪ ಜಿಡ್ಡಿಬಾಗಿಲ, ಮಹಾದೇವಗೌಡ ಲಿಂಗನಗೌಡ್ರ, ಮಲ್ಲಯ್ಯ ಮಹಾಪುರುಷಮಠ, ಭರಮಗೌಡ ಲಿಂಗನಗೌಡ್ರ, ಶಕುಂತಲಾ ಚಿತ್ರಗಾರ, ಚನ್ನಬಸ್ಸಮ್ಮ ಹಿರೇಮಠ, ರಜಿಯಾಬೇಗಂ ಕೊಟಬಾಗಿ, ಅಪ್ತಾಬ ತಹಸೀಲ್ದಾರ್, ಹನ್ಮಂತಪ್ಪ ತಳ್ಳಿಕೇರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here