ಕಲಬುರಗಿ:- ದಲಿತ ಸಿಎಂ ಬಗ್ಗೆ 2028ರ ಚುನಾವಣೆಯಲ್ಲಿ ಗಂಭೀರ ಚರ್ಚೆ ಮಾಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ದಲಿತ ಸಿಎಂ ಕೂಗು ನಿಂತಿದೆ. ಹೊಸ ಎಲೆಕ್ಷನ್ ಆದ ಮೇಲೆ ನೋಡೋಣ. ಸದ್ಯ ದಲಿತ ಸಿಎಂ ಕೂಗು ಕೇಳಿಬಂದಿಲ್ಲ. 2028ರ ಚುನಾವಣೆಯಲ್ಲಿ ಅದರ ಬಗ್ಗೆ ಗಂಭೀರ ಚರ್ಚೆ ಮಾಡೋಣ ಅಂತ ತಿಳಿಸಿದ್ದಾರೆ.
ಇನ್ನೂ ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ ಅಂತ ಎಚ್. ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಹೇಳಿಕೆಗೂ ನಮ್ಮಗೂ ಸಂಬಂಧ ಇಲ್ಲ ಅವರು ನಮ್ಮ ಪಕ್ಷದವರಲ್ಲ. ನಮ್ಮ ಪಕ್ಷದವರು ಹೇಳಿದ್ರೆ ಅದಕ್ಕೆ ರಿಯಾಕ್ಟ್ ಮಾಡಬಹುದು, ಅವರ ಹೇಳಿಕೆಗೂ ನಮಗೂ ಯಾವ ಸಂಬಂಧ ಇಲ್ಲ ಎಂದಿದ್ದಾರೆ.