ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜದಲ್ಲಿ ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ಅದಕ್ಕೆ ಯುವಶಕ್ತಿ ಕಾರಣವಾಗಿರುತ್ತದೆ. ಯುವಕರು ಮನಸ್ಸು ಮಾಡಿದರೆ ಎಂತಹ ಕಷ್ಟದ ಕಾರ್ಯವನ್ನೂ ಸಹ ಸುಲಭವಾಗಿ ನಿಭಾಯಿಸಬಹುದು. ಯುವ ಶಕ್ತಿಯ ಮುಂದೆ ಯಾವುದೇ ಶಕ್ತಿ ನಿಲ್ಲಲಾರದು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಪಟ್ಟಣದ ಮ್ಯಾಗೇರಿ ಓಣಿಯ ಶ್ರೀ ಹೊನ್ನಕೇರಿ ಮಲ್ಲಯ್ಯ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ, ಸಭಾಭವನ ಉದ್ಘಾಟನಾ ಸಮಾರಂಭ ಹಾಗೂ ಧರ್ಮ ಸಭೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಯುವಕರಿಗೆ ತಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ಸರಿಯಾದ ಅರಿವು ಮೂಡಬೇಕಾಗಿದೆ. ದುಶ್ಚಟಗಳಿಗೆ ದಾಸರಾಗಿ ತಮ್ಮಲ್ಲಿರುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳಿಗೆ ಆದ್ಯತೆ ನೀಡಬೇಕಿದೆ. ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಇಲ್ಲಿನ ಯುವ ಪಡೆ ಮುಂದಾಗಿರುವದು ಶ್ಲಾಘನೀಯ ಎಂದರು.
ಹುಲ್ಲೂರು ಅಮೋಘ ಶಿದ್ದೇಶ್ವರಮಠದ ಶ್ರೀ ರಾಯಪ್ಪಯ್ಯನವರು ಅಮೋಘಿಮಠ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಅರ್ಚಕ ನೀಲಪ್ಪ ಕೋರಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಕಮಿಟಿ ಅಧ್ಯಕ್ಷ ಮಲ್ಲೇಶ ಗೊಜಗೊಜಿ ವಹಿಸಿದ್ದರು. ಉದ್ಯಮಿ ಮಲ್ಲೇಶಪ್ಪ ತಾಂಬೆ ದಂಪತಿಗಳು ಸಭಾಭವನ ಉದ್ಘಾಟಿಸಿದರು. ಮಹೇಶ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ ಸಿಬಾರ ಉದ್ಘಾಟನೆ ಮಾಡಿದರು. ನಿಂಗಪ್ಪ ಬನ್ನಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಗಂಗಮ್ಮ ಗದ್ದಿ, ವೀರೇಂದ್ರಗೌಡ ಪಾಟೀಲ, ಮಂಜುನಾಥ ಘಂಟಿ, ಜಯಕ್ಕ ಕಳ್ಳಿ, ಭಾಗ್ಯಶ್ರೀ ಬಾಬಣ್ಣ, ಶಿದ್ದಪ್ಪ ಪೂಜಾರ, ಗಣಪ್ಪ ಉಳ್ಳಟ್ಟಿ, ಮಲ್ಲಪ್ಪ ಕೋರಿ, ಮಲ್ಲಪ್ಪ ಗುಡಗುಂಟಿ, ಅಮರಪ್ಪ ಗುಡಗುಂಟಿ, ಛಾಯಪ್ಪ ಬಸಾಪೂರ, ರಾಮಣ್ಣ ರಿತ್ತಿ, ಪಾಪಣ್ಣ ಬನ್ನಿ, ಮಲ್ಲಮ್ಮ ಚಿಂಚಲಿ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.
ಪುರಸಭೆ ಮಾಜಿ ಅಧ್ಯಕ್ಷ ವಿ.ಜಿ. ಪಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀಲಪ್ಪ ಪಡಗೇರಿ ಸ್ವಾಗತಿಸಿದರು, ನಾಗರಾಜ ಶಿಗ್ಲಿ ನಿರೂಪಿಸಿದರು.