ವಿಜಯಸಾಕ್ಷಿ ಸುದ್ದಿ, ಗದಗ: ಜ್ಞಾನ ದೇಗುಲವಾಗಿರುವ ಗ್ರಂಥಾಲಯ ನಮ್ಮ ಹಿರೇಹಂದಿಗೋಳ ಗ್ರಾಮದಲ್ಲಿ ಪ್ರಾರಂಭವಾಗುತ್ತಿರುವುದು ನನಗೆ ಹಾಗೂ ವಿದ್ಯಾರ್ಥಿಗಳಿಗೆ, ಗ್ರಂಥಾಲಯ ಪ್ರೇಮಿಗಳಿಗೆ ಬಹಳಷ್ಟು ಖುಷಿ ತಂದಿದೆ ಎಂದು ಬಿಂಕದಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಪರಪ್ಪನವರು ಹೇಳಿದರು.
ಅವರು ಬಿಂಕದಕಟ್ಟಿ ಗ್ರಾಪಂ ವ್ಯಾಪ್ತಿಯ ಹಿರೇಹಂದಿಗೋಳ ಗ್ರಾಮದಲ್ಲಿ ಉಪಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ನಮ್ಮೂರಲ್ಲಿ ಗ್ರಂಥಾಲಯದ ಅವಶ್ಯಕತೆಯಿತ್ತು. ಅದು ಓದುಗರ ಬಹುದಿನಗಳ ಬೇಡಿಕೆಯಾಗಿತ್ತು. ಆ ಕನಸು ಈಗ ನನಸಾಗಿದೆ. ಪ್ರತಿಯೊಬ್ಬರು ಅದರಲ್ಲೂ ವಿದ್ಯಾರ್ಥಿಗಳು ಈ ಗ್ರಂಥಾಲಯದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗದಗ ತಾ.ಪಂ ಮಾಜಿ ಅಧ್ಯಕ್ಷ ಎಂ.ಐ. ಪಾಟೀಲ, ಬಿಂಕದಕಟ್ಟಿ ಗ್ರಾ.ಪಂ ಸದಸ್ಯ ಅಶೋಕ್ ಕರೂರ, ಸದಸ್ಯ ಡಿ.ಬಿ. ಕರಿಗೌಡ್ರ, ಎಮ್.ಎಚ್. ಮಡಿಕೇರಿ, ಬಿಂಕದಕಟ್ಟಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆರ್.ಎಂ. ಕಿರೇಸೂರು ಗ್ರಂಥಾಲಯದ ಮಹತ್ವ ಕುರಿತು ಮಾತನಾಡಿದರು.
ವೇದಿಕೆಯ ಮೇಲೆ ಬಿಂಕದಕಟ್ಟಿ ಗ್ರಾ.ಪಂ ಸದಸ್ಯೆ ಗಂಗವ್ವ ತಡಸಿ, ಉಪಾಧ್ಯಕ್ಷೆ ದ್ಯಾಮವ್ವ ಆರಟ್ಟಿ, ಎಸ್ಡಿಎಮ್ಸಿ ಅಧ್ಯಕ್ಷ ನಿಂಗಪ್ಪ ತಳವಾರ, ಮಹಾದೇವಪ್ಪ ಚುರ್ಚಿಹಾಳ, ಶಿವಪುತ್ರಯ್ಯ ಯಲಬುರ್ಗಿಮಠ, ಎಸ್.ಎನ್. ಪಾಟೀಲ, ಆರ್.ಎಚ್. ಪಾಟೀಲ, ಮಲ್ಲನಗೌಡ ಗುರನಗೌಡ್ರ, ವಿರೂಪಾಕ್ಷಿಗೌಡ್ರು ತಡಸಿ, ದುರ್ಗಪ್ಪ ದಾಸಣ್ಣವರ, ಜಕ್ಕನಗೌಡ ಜಕ್ಕನಗೌಡ್ರ ಈಶ್ವರಗೌಡ ತಡಸಿ, ಎಸ್.ಬಿ. ಕುರ್ತಕೋಟಿ, ಶಂಕರಗೌಡ ಹುಲ್ಲೂರು, ಮುತ್ತಣ್ಣ ಹೂಗಾರ ಮತ್ತಿತರರು ಉಪಸ್ಥಿತರಿದ್ದರು. ಮಲ್ಲೇಶಪ್ಪ ಮಡಿಕೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.