ಎಲ್‌ಐಸಿ ಸ್ನೇಹಜೀವಿ ಕ್ರಿಕೆಟ್ ಕ್ರೀಡೋತ್ಸವ

0
module: NormalModule; touch: (-1.0, -1.0); modeInfo: ; sceneMode: SFHDR; cct_value: 0; AI_Scene: (-1, -1); aec_lux: 135.0;
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜೀವವಿಮಾ ನಿಗಮ ಗದಗ ಶಾಖೆಯ ವಿಮಾ ಪ್ರತಿನಿಧಿಗಳು ಹಾಗೂ ಸೇಲ್ಸ್ ವಿಭಾಗದ ನೌಕರರಿಂದ ಎಲ್‌ಐಸಿ ಸ್ನೇಹಜೀವಿ ಕ್ರಿಕೆಟ್ ಕ್ರೀಡೋತ್ಸವ ಗದಗ ಬಿಪಿಎಡ್ ಕಾಲೇಜ್ ಮೈದಾನದಲ್ಲಿ ಜರುಗಿತು.

Advertisement

ಪಂದ್ಯಾವಳಿಯನ್ನು ಎಲ್‌ಐಸಿ ಶಾಖೆಯ ಮ್ಯಾನೇಜರ್ ಎಚ್.ಎಂ. ಭಜಂತ್ರಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರ ನಡುವೆ ಸ್ನೇಹ-ಸಂಬಂಧ ಬೆಳೆಯಲು ಸಹಕಾರಿಯಾಗುತ್ತದೆ. ಕ್ರಿಕೆಟ್ ಆಡುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.

ಕ್ರೀಡಾಕೂಟದಲ್ಲಿ ಗದಗ ಟಕ್ ಟೀಮ್, ಗದಗ ಉಮಂಗ್ ಮತ್ತು ಗದಗ ಉತ್ಸವ ತಂಡಗಳು ಭಾಗವಹಿಸಿದ್ದವು. ಎಲ್‌ಐಸಿ ಉಪ ಶಾಖಾಧಿಕಾರಿ ಮಹಾಂತೇಶ ಪಾರಿತೋಷಕವನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿಮಾ ಪ್ರತಿನಿಧಿಗಳಾದ ಡಿ.ಸಿ. ಜವಳಿ, ಯಲ್ಲಪ್ಪ ಎಚ್.ಬಾಬರಿ, ರಾಜು ಗಾಣಿಗೇರ, ಜಗದೀಶ ಗೌಡರ, ಎನ್.ವಿ. ಮಾಳಿ, ಕೆ.ಪಿ. ಅಳವುಂಡಿ, ಎಲ್.ಐ. ಪಿಡ್ಡನಗೌಡರ, ಡಿ.ಎಚ್. ಗೋಡಬಾಲಿ, ರಾಜು ಕಾರಡಗಿ, ಎಸ್.ಎಂ. ಬಳಿಗಾರ, ಲಮಾಣಿ, ಪ್ರಭು ರವದಿ, ಈರಣ್ಣ ದೋಟಿಕಲ್ಲ, ಅಭಿವೃದ್ಧಿ ಅಧಿಕಾರಿಗಳಾದ ರವಿ ಹಕ್ಕಿ, ಸಿದ್ಧಾರ್ಥ್, ಕಾಮತ್ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here