ವಿಜಯಸಾಕ್ಷಿ ಸುದ್ದಿ, ಧಾರವಾಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವ ಸ್ಪಂದನ ಕೇಂದ್ರ ಧಾರವಾಡ ಹಾಗೂ ಎನ್.ಎಸ್.ಎಸ್ ಸಹಯೋಗದಲ್ಲಿ ಜೀವನ ಕೌಶಲ್ಯ ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರವನ್ನು ಶ್ರೀ ಅಮೃತೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಅಣ್ಣಿಗೇರಿಯಲ್ಲಿ ಏರ್ಪಡಿಸಲಾಗಿತ್ತು.
Advertisement
ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಎಂ.ಟಿ. ಮಂಜುನಾಥಸ್ವಾಮಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯ ಯುವ ಸ್ಪಂದನ ಯೋಜನೆಯ ನೋಡಲ್ ಅಧಿಕಾರಿ ವರುಣಕುಮಾರ ಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳನ್ನು ಚಟುವಟಿಕೆಗಳ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಮ್.ಆರ್. ಮುಂಡರಗಿ, ಎನ್.ಎಸ್.ಎಸ್ ಅಧಿಕಾರಿ ಅಶೋಕ ಬಿ.ಬಿ, ಧಾರವಾಡ ಜಿಲ್ಲಾ ಯುವ ಸಮಲೋಚಕರಾದ ಸುರೇಖಾ ನಾವಲಗಿ ಮತ್ತು ನವಲಗುಂದ ಯುವ ಪರಿವರ್ತಕ ಗಂಗಾಧರ ರೋಣದ ಉಪಸ್ಥಿತರಿದ್ದರು.