ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಲೋಕಾಯುಕ್ತ ಇನ್ಸ್ಪೆಕ್ಟರ್ ಪರಮೇಶ್ವರ ಕವಟಗಿ ಅವರ ನೇತೃತ್ವದ ಸಿಬ್ಬಂದಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಶುಚಿತ್ವ, ವೈದ್ಯರ ಕೊರತೆ, ಬಾಣಂತಿಯರಿಗೆ ಊಟದ ವ್ಯವಸ್ಥೆ, ಆಸ್ಪತ್ರೆ ಮತ್ತು ಶೌಚಾಲಯ ಸ್ವಚ್ಛತೆ, ಹಾಜರಾತಿ ಪುಸ್ತಕದ ನಿರ್ವಹಣೆ, ಮೇಲ್ವಿಚಾರಣೆ ಇಲ್ಲದಿರುವುದು, ಅವಧಿ ಮುಗಿದ ಕೆಲ ಔಷಧಿಗಳು, ಸಿಬ್ಬಂದಿಗಳು ತಾವೇ ಸ್ವಯಂ ಕೆಸಲದ ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸುವುದು, ಎಕ್ಸರೇ ತೆಗೆಯುವ ಸಿಬ್ಬಂದಿ ರಸೀದಿ ಇಲ್ಲದೇ ದುಡ್ಡು ಪಡೆಯುವುದು, ಹೆಚ್ಐವಿ ಪರೀಕ್ಷೆ ಸಿಬ್ಬಂದಿ ಸರಿಯಾಗಿ ಬಾರದಿರುವುದು, ಸೆಕ್ಯೂರಿಟಿ, ಸಮರ್ಪಕ ಬೆಡ್ ಸೇರಿ ಅವ್ಯವಸ್ಥೆ ಮತ್ತು ಇಲ್ಲಗಳ ಸಮಸ್ಯೆಯನ್ನು ಸ್ವತಃ ಅರಿತರು.
ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ. ಔಷಧಿಯನ್ನು ಹೊರಗಡೆ ಬರೆದುಕೊಡುತ್ತಾರೆ. ಹೆರಿಗೆ ನಂತರ ಹಣ ಕೇಳುತ್ತಾರೆ. ತಾಯಿ ಕಾರ್ಡ್ ಇಲ್ಲ, ಬಾಣಂತಿಯರಿಗೆ ಊಟ ಸೇರಿ ಸರಿಯಾದ ವ್ಯವಸ್ಥೆ ಇಲ್ಲದಿರುವ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದು ಸಮಸ್ಯೆ ದಾಖಲಿಸಿಕೊಂಡರು. ಈ ವೇಳೆ ಹಾಜರಿದ್ದ ವೈದ್ಯರು ಮತ್ತು ಸಿಬ್ಬಂದಿಗೆ ಉಂಟಾಗಿರುವ ಅವ್ಯವಸ್ಥೆ ಸರಿಪಡಿಸಿಕೊಳ್ಳಬೇಕು ಮತ್ತು ಆಸ್ಪತ್ರೆಯಲ್ಲಿನ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ರೋಗಿಗಳಿಗೆ ಕಲ್ಪಿಸಿ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಿದ ಅವರು, ಅಸ್ಪತ್ರೆಯಲ್ಲಿ ಕಂಡುಬAದ ಅವ್ಯವಸ್ಥೆ, ಸಮಸ್ಯೆಗಳನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.