ಮದಕರಿ ನಾಯಕ ಧೀರ ಹೋರಾಟಗಾರ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿಯ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಕೋಟೆ ನಾಡಿನ ಕಣ್ಮಣಿ ವೀರ ಮದಕರಿ ನಾಯಕರ ಜಯಂತಿಯನ್ನು ನಾಯಕ ಸಮಾಜದ ವತಿಯಿಂದ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಸೋಮಣ್ಣ ಡಾಣಗಲ್ಲ ಮಾತನಾಡಿ, ಮದಕರಿ ನಾಯಕ ಧೀರ ಹೋರಾಟಗಾರರಾಗಿದ್ದರು. ಕನ್ನಡ ನಾಡನ್ನು ಉಳಿಸಿ ಬೆಳೆಸಲು ಅವರು ಮಾಡಿದ ಕಾರ್ಯಗಳು ನಮಗೆಲ್ಲ ಮಾರ್ಗದರ್ಶಿಯಾಗಿವೆ. ಅವರಂತೆ ನಮ್ಮ ಮಕ್ಕಳು ತಾಯಿ ನಾಡಿನ ಕುರಿತು ಹೆಮ್ಮೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಾನಂದ ತಳವಾರ, ರಾಮಣ್ಣ ತಳವಾರ, ಮಂಜು ಇಚ್ಚಂಗಿ, ಮಹಾದೇವ ಸಂಧಿಮನಿ, ರಾಜು ಓಲೇಕಾರ, ದೇವಪ್ಪ ವಾಲಿಕಾರ, ಮಾಯಪ್ಪ ವಾಲಿಕಾರ, ಮಹಾಂತೇಶ ತಳವಾರ, ಸುಹಾಸ್ ವಾಲಿಕಾರ, ಈರಣ್ಣ ಅಳ್ಳಳ್ಳಿ, ಸುರೇಶ ಇಟಿಗಿ, ರಾಜು ನದಾಫ್, ಉಳ್ಳಟ್ಟಿ ರಾಮಣ್ಣ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here