ಸಹಕಾರಿ ಸಂಘದ ಅಧ್ಯಕ್ಷರಾಗಿ ಮಹದೇವಪ್ಪ ಹುಬ್ಬಳ್ಳಿ ಆಯ್ಕೆ

0
Oplus_0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಹದೇವಪ್ಪ ಹುಬ್ಬಳ್ಳಿ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಬಸವರಾಜ ವಾಲಿ ಅವರು ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಮಹದೇವಪ್ಪ ಹುಬ್ಬಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.

Advertisement

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹದೇವಪ್ಪ ಹುಬ್ಬಳ್ಳಿ ಅವರನ್ನು ಸಂಘದ ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಪ್ರಮುಖರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಪರಶುರಾಮ ವಂಟಕರ, ಷಣ್ಮುಖಪ್ಪ ಬಡ್ನಿ, ಅಶೋಕ ಸೋನಗೋಜಿ, ಬಿ.ವ್ಹಿ. ಸುಂಕಾಪೂರ, ಬಸವರಾಜ ಬಡ್ನಿ, ಸಂಜಯ ನೀಲಗುಂದ, ಬಸವರಾಜ ಬಾತಾಖಾನಿ, ಮಹಾಂತೇಶ ನೀಲಗುಂದ, ಕುಬೇರಪ್ಪ ಗಡಾದ, ಇಮಾಮಸಾಬ ಶೇಖ್, ದೇವಪ್ಪ ಲಕ್ಕುಂಡಿ, ನಾಗರಾಜ ನೀಲಗುಂದ, ಆರ್.ಸಿ. ಕಾಮಾಜಿ, ಎ.ಎಸ್. ಹುಣಸಿಮರದ, ಮಂಜುನಾಥ ಅಳಗವಾಡಿ, ಮಂಜುನಾಥ ಮಳ್ಳಿ, ರಮೇಶ ಪೂಜಾರ ಮತ್ತಿತರರು ಇದ್ದರು. ಚುನಾವಣಾಧಿಕಾರಿಯಾಗಿ ಶಾಂತಾ ಕಾರ್ಯನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here