ವಿಜಯಸಾಕ್ಷಿ ಸುದ್ದಿ, ಗದಗ : ಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜೂನ್ 26ರ ಸಂಜೆ 6 ಗಂಟೆಗೆ ಮಹಾರಥೋತ್ಸವ ಹಾಗೂ ಧರ್ಮೋತ್ತೇಜಕ ಮಹಾಸಭೆ ಜರುಗಲಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಲಿಂ.ಪಂ. ಪಂಚಾಕ್ಷರ ಗವಾಯಿಗಳವರ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರ ಭಾವಚಿತ್ರಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಇಲಕಲ್ಲಿನ ಆರ್. ಶರಣಬಸವ ಶಾಸ್ತಿçಗಳು ಅವರಿಂದ ತಿಂಗಳಪರ್ಯಂತ ನಡೆದ ಪಂ. ಪಂಚಾಕ್ಷರ ಗವಾಯಿಗಳವರ ಮಹಾಪುರಾಣ ಮಹಾಮಂಗಲಗೊಳ್ಳುವದು.
ಸಂಜೆ 6 ಗಂಟೆಗೆ ಮಹಾರಥೋತ್ಸವ ಜರುಗುವದು. ನಂತರ ನಡೆಯುವ ಧರ್ಮೋತ್ತೇಜಕ ಮಹಾಸಭೆಯ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಮೂರುಸಾವಿರ ಮಠದ ಪೂಜ್ಯಶ್ರೀ ಜ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸುವರು. ತುಮಕೂರ ಸಿದ್ದಗಂಗಾ ಶ್ರೀಮಠದ ಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಬಳಗಾನೂರಿನ ಪೂಜ್ಯಶ್ರೀ ಶಿವಶಾಂತವೀರ ಶರಣರು, ಚೆನ್ನಮ್ಮ ಕಿತ್ತೂರಿನ ನಿಚ್ಚಣಿಕೆಯ ಗುರು ಮಡಿವಾಳೇಶ್ವರ ಪಂಚಾಕ್ಷರ ಮಹಾಸ್ವಾಮಿಗಳು, ಮುದ್ದೇಬಿಹಾಳದ ಪೂಜ್ಯಶ್ರೀ ಡಾ. ಲಾಲಲಿಂಗೇಶ್ವರ ಶರಣರು, ಹಿರೇಗುಳವಾಳದ ಪೂಜ್ಯಶ್ರೀ ಹನುಮಂತಪ್ಪ ಯಾಳವಾರ ಅವರು ಸಮ್ಮುಖ ವಹಿಸುವರು.
ಮುಖ್ಯ ಅತಿಥಿಗಳಾಗಿ ವಿ.ಪ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಕಳಕಪ್ಪ ಬಂಡಿ, ಬಿಜೆಪಿ ಮುಖಂಡ ಅನಿಲ್ ಮೆಣಸಿಕಾಯಿ, ಗೋಕಾಕನ ಅಂಬಿಕಾ ಜಾರಕಿಹೊಳಿ, ಮುಚಕಂಡಯ್ಯನವರ ಹಂಗರಗಿ, ವೀರಬಸಯ್ಯ ರೇಣುಕಮಠ, ಧಾರವಾಡದ ಡಾ. ಜೆ.ಎಂ. ಚಂದ್ರನವರ, ಬಳ್ಳಾರಿಯ ಪುರುಷೋತ್ತಮ ಗೌಡ್ರು, ಎಂ.ಎಸ್. ಪಾಟೀಲ, ಶಿವಮೊಗ್ಗದ ಎಸ್. ಗುರುಪಂಚಾಕ್ಷರಿ, ಎನ್.ವಿ. ಕುಬೇರಪ್ಪನವರು, ಕಾರಟಿಗಿಯ ಮಹಾಂತಯ್ಯಸ್ವಾಮಿ, ಪಂಚಾಕ್ಷರಯ್ಯ ಹಿಡ್ಕಿಮಠ, ಕಾರಟಗಿಯ ಶರಣಪ್ಪನವರು ಕೊಟಗಿ, ಕಲ್ಲೂರಿನ ಕಳಕಪ್ಪಗೌಡ್ರ ಜಮ್ಮಾಪುರ, ಜೇವರ್ಗಿಯ ನಾಡಗೌಡ್ರು ಅಪ್ಪಾಸಾಗೌಡ್ರು, ಮುಳುವಾಡದ ಫ.ಗು. ಸಿದ್ದಾಪುರ, ಬಾದಾಮಿಯ ನಾಗರಾಜ ಕಾಚಟ್ಟಿ, ಎಸ್.ಬಿ. ಅವರಾದಿ, ರಾಚಣ್ಣ ಪಟ್ಟಣದ ಉಪಸ್ಥಿತರಿರುವರು.
ಗದುಗಿನ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವರು. ಪೂಜ್ಯಶ್ರೀ ಕಲ್ಲಯ್ಯಜ್ಜನವರು ಅಬಾರ ಮನ್ನಣೆ ಮಾಡುವರು. ಅಡ್ನೂರಿನ ಎಂ.ಕಲ್ಲಿನಾಥ್ ಶಾಸ್ತಿçಗಳು ಸಭಾ ನಿರೂಪಣೆ ಮಾಡುವವರು. ನಂತರ ಅಹೋರಾತ್ರಿ ಸ್ವರಸಮಾರಾಧನೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮದರಿಯ ರಾಚಯ್ಯ ಶಾಸ್ತಿç ಹಿರೇಮಠ-ಪ್ರವಚನ ಕ್ಷೇತ್ರ, ನಾಗಾವಿಯ ಲಕ್ಷ್ಮಣ ತಳವಾರ-ಗಾಯನ ಕ್ಷೇತ್ರ ಹಾಗೂ ಡಾ.ಹನುಮಂತ ಕೊಡಗಾನೂರ ಅವರಿಗೆ `ಕುಮಾರಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿಯನ್ನು ರಾಮಣ್ಣ ಮಲ್ಲಿಗವಾಡ- (ಸಂಗೀತ ಕ್ಷೇತ್ರ) ಪ್ರದಾನ ಮಾಡಲಾಗುವುದು.
ಜಗದ್ಗುರು ಮಹಾಸನ್ನಿಧಿಯವರಿಂದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರ `ಅಷ್ಟೋತ್ತರ ಶತನಾಮಾವಳಿ’ `ಅಷ್ಟಾವರಣ ಕಥಾ ಕೀರ್ತನ ಮಾಲಿಕೆ’ ಹಾಗೂ `ಶ್ರೀಗುರು ಪುಟ್ಟರಾಜ ಚರಿತಂ(ಪುರಾಣ)’ ಲೋಕಾರ್ಪಣೆಗೊಳ್ಳಲಿವೆ.