ಕೋಲಾರ: ಮುನೇಶ್ವರಸ್ವಾಮಿ ದೇಗುಲಕ್ಕೆ ಮಹೇಂದ್ರ ಟೆಂಪೊ ಡಿಕ್ಕಿ, ಓರ್ವ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿಯ ಹಸಾಂಡಹಳ್ಳಿ ಬಳಿ ನಡೆದಿದೆ. ಮಾಸ್ತಿ ಗ್ರಾಮದ ಚಂದ್ರಶೇಖರ್(38) ಮೃತ ದುರ್ದೈವಿಯಾಗಿದ್ದು,
ಹಸಾಂಡಹಳ್ಳಿ ಗ್ರಾಮದಿಂದ ಮಾಸ್ತಿಗೆ ಬಾರುವಾಗ ದುರ್ಘಟನೆ ಸಂಭವಿಸಿದೆ. ದೇಗುಲದಲ್ಲಿ ಪೂಜೆ ಮಾಡ್ತಿದ್ದ ಮೂವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಇನ್ನೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



