ಬೆಂಗಳೂರು: ಮನೆ ದರೋಡೆ ಮಾಡುತ್ತಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶೋಯೆಬ್ ಪಾಷಾ ಅಲಿಯಾಸ್ ತುರುಕಾ ಬಾಬು ಬಂಧಿತ ಆರೋಪಿ. ಆರೋಪಿ ಶೋಯೆಬ್ ಪಾಷಾ ಐದು ಮನೆಗಳಲ್ಲಿ ದರೋಡೆ ಮಾಡಿದ್ದಾನೆ. ಬಂಧಿತನಿಂದ 101 ಗ್ರಾಂ ತೂಕದ ಚಿನ್ನಾಭರಣ, ಒಂದು ಬೈಕ್, ಎರಡು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಶೋಯೆಬ್ ಪಾಷಾ ಹಾಸನದಿಂದ ತುಮಕೂರುವರೆಗೆ ರೈಲಿನಲ್ಲಿ ಬರುತ್ತಿದ್ದನು. ತುಮಕೂರು ರೈಲು ನಿಲ್ದಾಣದಲ್ಲಿ ಟಿವಿಎಸ್ ಅಪಾಚೆ ಬೈಕ್ ಹತ್ತಿ ನೆಲಮಂಗಲಕ್ಕೆ ಬರುತ್ತಿದ್ದನು. ಲಾಡ್ಜ್ವೊಂದರಲ್ಲಿ ರೂಮ್ ಮಾಡಿಕೊಂಡು ಇರುತ್ತಿದ್ದನು.
ಬಳಿಕ ಎರಡು ದಿನ ಬೀಗ ಹಾಕಿದ ಮನೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದನು. ತಾನು ಟಾರ್ಗೆಟ್ ಮಾಡಿದ್ದ ಮನೆಗಳಿಗೆ ರಾತ್ರಿ ವೇಳೆ ತೆರಳಿ, ಬೀಗ ಒಡೆದು ಒಳ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದನು. ಸದ್ಯ ಆರೋಪಿಯನ್ನ ಬಂಧಿಸಿ ಬಂಧಿತನಿಂದ 101 ಗ್ರಾಂ ತೂಕದ ಚಿನ್ನಾಭರಣ, ಒಂದು ಬೈಕ್, ಎರಡು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ.