ಗದಗ:- ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಭದ್ರಾ ನದಿಯಲ್ಲಿ ಓರ್ವ ಮಗುವಿನ ಶವ ಪತ್ತೆಯಾಗಿದೆ.
ಮೂರು ವರ್ಷದ ಕಂದಮ್ಮ ವೇದಾಂತ ಡಂಬಳ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ಹೊತ್ತಿಗೆ ಮಗುವನ್ನ ದೂಡಿ ಮಂಜುನಾಥ್ ಎಂಬ ವ್ಯಕ್ತಿ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಿಡ್ಜ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಕ್ಕಳಾದ 4 ವರ್ಷದ ಪವನ್, 6 ವರ್ಷದ ಧನ್ಯಾ ಹಾಗೂ ಅಳಿಯನ ಮಗನಾದ ವೇದಾಂತನ ಜೊತೆಗೆ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದ. ಪತ್ನಿ ಜೊತೆಗಿನ ವಿರಸ, ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರೋ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆಯಿಂದ ಅಗ್ನಿ ಶಾಮಕ ದಳ ಸೇರಿದಂತೆ ಸ್ಥಳೀಯ ಮೀನುಗಾರರಿಂದ ಶೋಧಕಾರ್ಯ ನಡೆದಿತ್ತು. ಸಂಜೆ ಹೊತ್ತಿಗೆ ವೇದಾಂತ ಡಂಬಳ ಎಂಬ ಮಗುವಿನ ದೇಹ ಪತ್ತೆಯಾಗಿದೆ. ಇನ್ನೂ ಇಬ್ಬರು ಮಕ್ಕಳು ಹಾಗೂ ಮಂಜುನಾಥ್ ಗಾಗಿ ಶೋಧ ಮುಂದುವರೆದಿದೆ.