ಹಲಸಿನಹಣ್ಣು ಕದಿಯಲು ಬಂದು ಮರದಲ್ಲಿ ನೇತಾಡಿದ ವ್ಯಕ್ತಿ: ಖಾಕಿ ಸಹಾಯದಿಂದ ವ್ಯಕ್ತಿ ರಕ್ಷಣೆ

0
Spread the love

ಬೆಂಗಳೂರು: ಹಲಸಿನಹಣ್ಣು ಕದಿಯಲು ಬಂದು ವ್ಯಕ್ತಿಯೋರ್ವ ಮರದಲ್ಲೇ ನೇತಾಡಿರುವ ಘಟನೆ ನಗರದ ಕಮಿಷನರ್ ಕಚೇರಿ ಹಿಂಬಾಗ ಜರುಗಿದೆ.

Advertisement

ವ್ಯಕ್ತಿಯೋರ್ವ, ಅಲಿಅಸ್ಕರ್ ರಸ್ತೆಯ ಎಂಬಾಸಿ ಅಪಾರ್ಟ್ಮೆಂಟ್ ಆವರಣದಲ್ಲಿ ಹಲಸಿನ ಮರಕ್ಕೆ ಹತ್ತಿದ್ದ. ಈ ವೇಳೆ ವ್ಯಕ್ತಿಯನ್ನು ಸೆಕ್ಯೂರಿಟಿ ಗಮನಿಸಿದ್ದ. ಸೆಕ್ಯುರಿಟಿ ನೋಡಿದ ವ್ಯಕ್ತಿ, ಗಾಬರಿಗೊಂಡು ಮರದಿಂದ ಜಿಗಿಯಲು ಯತ್ನಿಸಿ ಮರದಲ್ಲೇ ನೇತಾಡಿದ್ದಾನೆ. ಕೊನೆಗೆ ಮರದಲ್ಲಿ ಸಿಲುಕಿ ಒದ್ದಾಡಿದ ವ್ಯಕ್ತಿಯನ್ನ ಪೊಲೀಸರು ಹಾಗೂ ಸ್ಥಳೀಯರು ಟಾರ್ಪಲ್ ಸಹಾಯದಿಂದ ರಕ್ಷಿಸಿದ್ದಾರೆ. ಸದ್ಯ ಆ ವ್ಯಕ್ತಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದು, ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.


Spread the love

LEAVE A REPLY

Please enter your comment!
Please enter your name here