ಮಂಡ್ಯ:- ಬೆಳ್ಳಂ ಬೆಳಗ್ಗೆ ಕಾಡಾನೆಗಳ ಹಿಂಡು ನಾಡಿಗೆ ಲಗ್ಗೆಯಿಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗೊರವನಹಳ್ಳಿಯಲ್ಲಿ ಜರುಗಿದೆ.
ಗೊರವನಹಳ್ಳಿ ಹಾಗೂ ಉಪ್ಪಿನಕೆರೆ ಗ್ರಾಮದ ಕಬ್ಬನಿಗದ್ದೆಯಲ್ಲಿ ಸುಮಾರು 5 ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಅದರಲ್ಲಿ ಮೂರು ಗಂಡು ಆನೆ ಹಾಗೂ ಎರಡೂ ಮರಿ ಆನೆಗಳು ಬಂದಿದೆ. ಜಮೀನೋಂದರಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಂಡು ಜನತೆ ಆತಂಕ ಹೊರ ಹಾಕಿದ್ದಾರೆ.
ಕಾಡಾನೆಗಳ ದಾಳಿಗೆ ರೈತರು ಬೆಳೆದಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಆನೆಗಳ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾಗಳ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿದೆ.



