ಮಂಗಳೂರು: ರೌಡಿಗಳ ನಡುವೆ ತಲ್ವಾರ್ ಕಾಳಗ; ಇಬ್ಬರಿಗೆ ಗಂಭೀರ ಗಾಯ!

0
Spread the love

ಮಂಗಳೂರು:- ನಗರದಲ್ಲಿ ಯುವಕರ ಗುಂಪಿನ ನಡುವೆ ತಲ್ವಾರ್ ಕಾಳಗ ನಡೆದಿದ್ದು, ಇಬ್ಬರಿಗೆ ಮಾರಣಾಂತಿಕ ಗಾಯವಾಗಿದೆ.

Advertisement

ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್, ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಹಲ್ಲೆ ನಡೆಸಿದ ಆರೋಪಿಗಳೆಂದು ಗುರುತಿಸಲಾಗಿದೆ.

ಘಟನೆ ಸಂಬಂಧ ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗೆ ಡಿ.ವೈ.ಎಸ್ಪಿ ನೇತ್ರತ್ವದಲ್ಲಿ ಎರಡು ತಂಡಗಳ ರಚನೆ ಮಾಡಲಾಗಿದೆ.

ಇಲ್ಲಿ ತಸ್ಲೀಮ್ ಹಾಗೂ ತಂಡದ ಮೇಲೆ ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ಮಾರಕ ದಾಳಿ ನಡೆದಿದೆ. ಹಳೇ ದ್ವೇಷದಿಂದ ತಸ್ಲೀಮ್ ಹಾಗೂ ತಂಡವನ್ನು ಕರೆಸಿ ತಲವಾರಿನಿಂದ ದಾಳಿ ಮಾಡಲಾಗಿದೆ.

ಅಸಲಿಗೆ ಈ ಎರಡು ತಂಡದ ಸದಸ್ಯರು ಮೊದಲು ಜೊತೆಯಲ್ಲೇ ಇದ್ದರು. ಈ ಎರಡು ತಂಡದ ಸದಸ್ಯರ ಮೇಲೆ ಕೊಲೆ ಪ್ರಕರಣ ಸೇರಿದಂತೆ ಸಾಕಷ್ಟು ಕೇಸ್ ಇದೆ. ಇಲ್ಲಿ ತಸ್ಲೀಮ್ ಹಾಗೂ ಮನ್ಸೂರ್ ತಂಡದ ನಡುವೆ ವಾರದ ಹಿಂದೆ ಭಿನ್ನಾಭಿಪ್ರಾಯ ಬಂದಿದೆ.

ಈ ಭಿನ್ನಾಭಿಪ್ರಾಯ ವಿಕೋಪಕ್ಕೆ ತಿರುಗಿ ತಲ್ವಾರ್ ದಾಳಿವರೆಗೂ ಬಂದಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here