ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಾಂಧಿ ಸರ್ಕಲ್ ಹತ್ತಿರ ಹೆಡ್ ಪೋಸ್ಟ್ ಹಿಂಭಾಗ ಮಾಲತೇಶ ಕಾಂಪ್ಲೆಕ್ಸ್ ಮಲ್ಲಿ ನೂತನವಾಗಿ ಪ್ರಾರಂಭಗೊಂಡ ಮಂಜು ಸ್ಪೋರ್ಟ್ಸ್ ಮಳಿಗೆಯ ಉದ್ಘಾಟನೆಯನ್ನು ಕಾನೂನು, ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸಿದರು.
ಅತ್ಯಾಧುನಿಕ ಗುಣಮಟ್ಟದ, ಉತ್ತಮ ಕಂಪನಿಯ ಕ್ರೀಡಾ ಸಾಮಗ್ರಿಗಳನ್ನು ಈ ನೂತನ ಮಳಿಗೆಯಲ್ಲಿ, ಒಂದೇ ಕಡೆ ಸಿಗುವುವಂತೆ ಮಾಡಿರುವ ಈ ಮಳಿಗೆಯನ್ನು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ನಮ್ಮ ಗದಗ ಜಿಲ್ಲೆ ಉತ್ತಮ ಕ್ರೀಡಾಪಟುಗಳನ್ನು ರಾಜ್ಯಕ್ಕೆ ಮತ್ತು ದೇಶಕ್ಕೆ ನೀಡಿದೆ ಎಂದು ಸಚಿವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಳಿಗೆಯ ವ್ಯವಸ್ಥಾಪಕರಾದ ಸಂದೀಪ ಅಥಣಿ, ಮ್ಯಾನೇಜರ್ ಮಂಜು ಕುರ್ತಕೋಟಿ, ಶೀತಲ ಸಂದೀಪ ಅಥಣಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗದಗ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಸೇರಿದಂತೆ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.