ವಿಜಯಸಾಕ್ಷಿ ಸುದ್ದಿ, ಗದಗ: ಗದಗ ವಿವೇಕಾನಂದ ರಸ್ತೆಯ ಮಸಾರಿ ಭಾಗದ ನಿವಾಸಿಗಳೂ, ಆರ್ಯವೈಶ್ಯ ಸಮಾಜದ ಹಿರಿಯರೂ ಆದ ಮನೋರಂಜಿತಾ ಗೋಪಾಲಕೃಷ್ಣ ಹೇಮಾದ್ರಿ (82) ಅವರು ರವಿವಾರ ಬೆಳಿಗ್ಗೆ ನಿಧನರಾದರು.
Advertisement
ಪತಿ, ಮಕ್ಕಳನ್ನು ಹಾಗೂ ಬಂಧು ಬಳಗವನ್ನು ಬಿಟ್ಟು ಅಗಲಿರುವ ಮೃತರ ಅಂತ್ಯಕ್ರಿಯೆಯು ಸಂಜೆ ಜರುಗಿತು. ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮೃತರ ನೇತ್ರದಾನ ನೀಡುವಂತೆ ಪ್ರೇರಣೆ ನೀಡಿದರು. ಕುಟುಂಬದವರ ಒಪ್ಪಿಗೆಯಂತೆ ಹುಬ್ಬಳ್ಳಿಯ ಕಣ್ಣಿನ ಆಸ್ಪತ್ರೆಯ ತಜ್ಞರ ತಂಡ ನೇತ್ರದಾನದ ಪ್ರಕ್ರಿಯೆ ಕೈಗೊಂಡಿತು.
ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರು, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೆರಣೇಕರ್, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ಝೋನ್ ಚೇರ್ಪರ್ಸನ್ ರಮೇಶ ಶಿಗ್ಲಿ ಮುಂತಾದವರಿದ್ದರು.


