ವಿಷ ಸೇವಿಸಿ ಗದಗನ ವಿವಾಹಿತ ಪ್ರೇಮಿಗಳು ಆತ್ಮಹತ್ಯೆ; ವಾಟರ್‌ಮ್ಯಾನ್ ಶಿವಯೋಗಿಸ್ವಾಮಿ, ಹನಮವ್ವ ಸುಸೈಡ್..!

0
Spread the love

ಹಾವೇರಿ: ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾದ ಇಬ್ಬರು ವಿವಾಹಿತ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ‌ ಗ್ರಾಮದಲ್ಲಿ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಶಿವಯೋಗಿಸ್ವಾಮಿ ಹಿರೇಮಠ (45), ಹನಮವ್ವ(ಗೀತಾ) (35) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು.

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಡಗೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಬ್ಬರು ವಿಷ ಸೇವಿಸಿದ್ದಾರೆ.

ಶಿವಯೋಗಿಸ್ವಾಮಿಗೆ ಪತ್ನಿ, ಮಕ್ಕಳು ಇದ್ದಾರೆ ಎನ್ನಲಾಗಿದೆ. ಹಾಗೂ ಹನಮವ್ವಳಿಗೂ ಮಕ್ಕಳು ಇದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಶಿವಯೋಗಿಸ್ವಾಮಿ ಹಾಗೂ ಹನಮವ್ವಳ ಮಧ್ಯೆ ಹಲವು ವರ್ಷಗಳಿಂದ ಸಂಬಂಧವಿತ್ತು ಎನ್ನಲಾಗುತ್ತಿದೆ. ಹನಮವ್ವ ದೀಪಾವಳಿ ಹಬ್ಬಕೆಂದು ತವರೂರು ಕೊಕ್ಕರಗುಂದಿ ಗ್ರಾಮಕ್ಕೆ ಬಂದಿದ್ದಳು.

ಈ ಸಂದರ್ಭದಲ್ಲಿ ಶಿವಯೋಗಿಸ್ವಾಮಿ ಅವರ ಜೊತೆ ರಾಣೆಬೆನ್ನೂರ ತಾಲೂಕಿನ ಗುಡಗೂರ ಗ್ರಾಮದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಇಬ್ಬರೂ ವಿಷ ಸೇವಿಸಿದ್ದಾರೆ.

ನಂತರ ಶಿವಯೋಗಿಸ್ವಾಮಿ ಕೊಕ್ಕರಗುಂದಿ ಗ್ರಾಮದ ತನ್ನ ಗೆಳೆಯ ಗುಡ್ಡಪ್ಪ ಹೊಸಮನಿಗೆ ಫೋನ್ ಮಾಡಿ, ನಾನು ಹಾಗೂ ಹನಮವ್ವ‌ ಇಬ್ಬರು ರಾಣಿಬೆನ್ನೂರು ಕಡೆಗೆ ಬಂದಿದ್ದೇವೆ,‌ ಮತ್ತೆ ಊರಿಗೆ ಬರಲ್ಲ ಎಂದು ಹೇಳಿದ್ದಾನೆ.

ಆಗ ಮತ್ತೆ ಗುಡ್ಡಪ್ಪ ಶಿವಯೋಗಿಸ್ವಾಮಿಯ ಫೋನ್‌ಗೆ ಕರೆ ಮಾಡಿದಾಗ, ಹನಮವ್ವ ಮಾತನಾಡಿ, ನಾವಿಬ್ಬರು ವಿಷ ಕುಡಿದೀವಿ ಅಂತ ಹೇಳಿದ್ದಾಳೆ. ಇದರಿಂದಾಗಿ ಗಾಬರಿಬಿದ್ದ ಗುಡ್ಡಪ್ಪ ಹಾಗೂ ಶಿವಯೋಗಿ ಸ್ವಾಮಿ ಪತ್ನಿ ಶಶಿಕಲಾ ಅವರು ಗುಡಗೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಶಿವಯೋಗಿ ಸ್ವಾಮಿ ಮೃತಪಟ್ಟಿದ್ದು ಕಂಡು ಬಂದಿದೆ. ವಿಷ ಸೇವಿಸಿದ ನಂತರ ಹನಮವ್ವಳ ಸಂಬಂಧಿಕರು ಹನಮವ್ವಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ಹನಮವ್ವಳು ಮೃತಪಟ್ಟಿದ್ದಾಳೆ.

ಈ ಕುರಿತು ರಾಣಿಬೆನ್ನೂರು ಪೊಲೀಸ್ ಠಾಣೆಯಲ್ಲಿ 48/2023 ಕಲಂ 174 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here