ವಿಜಯಸಾಕ್ಷಿ ಸುದ್ದಿ, ಗದಗ : ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಬಲಿದಾನ ಮಾಡಿದ ಭಗತಸಿಂಗ್, ರಾಜಗುರು, ಸುಖದೇವ ಅವರ 94ನೇ ಹುತಾತ್ಮರ ದಿನವಾದ ಇಂದು ನಗರದ ಭಗತ್ಸಿಂಗ ಸರ್ಕಲ್ನಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
Advertisement
ಈ ಸಂದರ್ಭದಲ್ಲಿ ಭಗತ್ಸಿಂಗ್ ಅಭಿಮಾನಿ ಬಳಗದ ರವಿ ಹುಡೇದ, ಮಂಜುನಾಥ ಮುಳಗುಂದ, ದೀಪಕ, ಅನಿಲ, ಲಿಂಗರಾಜ, ಪ್ರಕಾಶ, ಸುನೀಲ, ಅಭಿಷೇಕ, ಕಾರ್ತಿಕ, ಶ್ರೀಧರ, ಮಹೇಶ, ಮಂಜುನಾಥ, ಗಿರೀಶ, ಮಹಾಂತೇಶ, ಪ್ರಸನ್ನ, ಪಂಕಜ, ವಿನಾಯಕ ಮುಂತಾದವರು ಉಪಸ್ಥಿತರಿದ್ದರು.