ವಿಜಯಸಾಕ್ಷಿ ಸುದ್ದಿ, ಗದಗ: ಅಮರ ಭಗತ್ ಸಿಂಗ್, ರಾಜಗುರು, ಸುಖದೇವ್ ಇವರ ಬಲಿದಾನ ದಿನದ ಅಂಗವಾಗಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಓIಒಂ) ಗದಗ ಜಿಲ್ಲಾ ಘಟಕ, ನ್ಯಾಷನಲ್ ಇಂಟಿಗ್ರೇಟೆಡ್ ಫೋರಮ್ ಆಫ್ ಆರ್ಟಿಸ್ಟ್ ಅಂಡ್ ಆಕ್ಟಿವಿಸ್ಟ್ ನ (ಓIಈಂA), ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಗದಗ, ರಾಜೀವ ಗಾಂಧಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ರೋಣ, ಡಾ. ಎಸ್.ವಿ. ತೋಟಗಂಟಿಮಠ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ಗದಗ, ಅಂಬಿಕಾ ರಕ್ತ ಭಂಡಾರ ಗದಗ ಇವರ ಸಹಯೋಗದಲ್ಲಿ ಸಂವೇದನ-2 ಅಂತಾರಾಷ್ಟ್ರೀಯ ರಕ್ತದಾನ ಜಾಗೃತಿ ಶಿಬಿರವನ್ನು ಮಾರ್ಚ್ 23ರಂದು ಜಿಲ್ಲಾ ಕ್ರೀಡಾಂಗಣ ಹತ್ತಿರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಓIಒಂ ಗೌರವಾಧ್ಯಕ್ಷರಾದ ಡಾ. ಎಸ್.ಆರ್. ಹಿರೇಮಠ, ರಾಜ್ಯ ವಕ್ತಾರರಾದ ಡಾ. ವಿರೇಶ ಅಂಗಡಿ, ಕಾರ್ಯದರ್ಶಿ ಡಾ. ಬಸವರಾಜ ಚನ್ನಪ್ಪಗೌಡರ, ಖಜಾಂಚಿ ಡಾ. ಗಿರೀಶ ಬಡಿಗೇರ, ರೋಣ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಐ.ಬಿ. ಕೊಟ್ಟೂರಶೆಟ್ಟಿ, ಡಾ. ಎಸ್.ವಿ. ತೋಟಗಂಟಿಮಠ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ನ ಚೇರಮನ್ ಡಾ. ಸಂತೋಷ ತೋಟಗಂಟಿಮಠ, ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ. ಅಶ್ರಫ್ ಸಾಮುದ್ರಿ, ಡಾ. ಗೋಡಬೋಲೆ, ನಿವೃತ್ತ ಪ್ರಾಚಾರ್ಯರಾದ ಡಾ. ಜಿ.ಬಿ. ಪಾಟೀಲ, ಡಾ. ಯು.ವಿ. ಪುರದ, ಅಂಬಿಕಾ ರಕ್ತ ಭಂಡಾರದ ಆರ್.ವಿ. ಚವ್ಹಾಣ, ಓIಒಂ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ.
ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲಿಚ್ಛಿಸುವವರು ಡಾ. ಜಯಕುಮಾರ ಬ್ಯಾಳಿ-9986711023, ಡಾ. ಬಸವರಾಜ ಚನ್ನಪ್ಪಗೌಡರ- 9900192627, ಡಾ. ಗಿರೀಶ ಬಡಿಗೇರ -97428 42134 ಇವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಲಿದಾನ ದಿನದ ನಿಮಿತ್ತ ಮಾರ್ಚ್ 21ರಿಂದ ಮಾರ್ಚ್ 23ರವರೆಗೆ ಸಂವೇದನಾ-2 ಶಿಬಿರದ ಮೂಲಕ ದೇಶದಾದ್ಯಂತ 2400 ಸ್ಥಳಗಳಲ್ಲಿ 1.5 ಲಕ್ಷ ಬ್ಲಡ್ ಯೂನಿಟ್ಗಳನ್ನು ಸಂಗ್ರಹಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ. ಈ ಮೂಲಕ ತನ್ನ ಹಳೆಯ ವಿಶ್ವ ದಾಖಲೆ ಮುರಿದು ಹೊಸ ದಾಖಲೆ ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಓIಒಂ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಜಯಕುಮಾರ ಬ್ಯಾಳಿ ತಿಳಿಸಿದ್ದಾರೆ.