ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿಯೊಂದು ವಿಷಯದ ಬಗ್ಗೆ ಸತತ ಅಧ್ಯಯನಶೀಲರಾದಾಗ ಯಾವ ವಿಷಯವೂ ಕಠಿಣವಾಗುವುದಿಲ್ಲ. ಗಣಿತ ವಿಷಯ ಮನುಷ್ಯನನ್ನು ತರ್ಕಕ್ಕೆ ತೆಗೆದುಕೊಂಡು ಹೋಗುವ ಮೂಲಕ ಮನುಷ್ಯನ ಬುದ್ಧಿಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದುದರಿಂದ ಗಣಿತ ವಿಷಯವು ಎಂದಿಗೂ ಕಬ್ಬಿಣದ ಕಡಲೆಯಲ್ಲ ಎಂದು ಶಿಕ್ಷಕಿ ವಿದ್ಯಾವತಿ ಪಾಟೀಲ ಹೇಳಿದರು.
ಅವರು ಪಟ್ಟಣದ ಕನಕದಾಸ ಶಿಕ್ಷಣ ಸಮಿತಿಯಲ್ಲಿ ಗದಗ ಐಕಾನ್ ಸಂಸ್ಥೆಯಿಂದ ಜರಗುತ್ತಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಐಕಾನ್ ಸಂಸ್ಥೇಯ ನಾಗರಾಜ ಬಂಡಿ ಮಾತನಾಡಿ, ಒಬ್ಬರಿಗೊಬ್ಬರು ಚರ್ಚೆ ನಡೆಸಿ ಅಭ್ಯಾಸದಲ್ಲಿ ತೊಡಗಿಕೊಂಡಾಗ ಮೆದುಳು ಹೆಚ್ಚು ಕ್ರೀಯಾಶೀಲವಾಗಿ ಇರಲು ಸಾಧ್ಯವಾಗುತ್ತದೆ ಎಂದರು.
ಶಿವಲಿಂಗಪ್ಪ ಕೊಂಡಿಕೊಪ್ಪ, ದಾವಲಸಾಬ ಲಾಡಸಾಬನವರ, ಪೂಜಾ ಮ್ಯಾಗೇರಿ, ರೇಷ್ಮಾ ಪರ್ವತಗೌಡರ, ಶಿವಲೀಲಾ ಕೋರಿ, ರುಭೀಯಾ ನಮಾಜಿ, ಲಕ್ಷ್ಮೀ ಕೆಲಗಾರ, ನಿಷಾಣಮತ ಲಾಡಸಾಬನವರ, ಆಶೀಫ್ ನದಾಫ್ ಇದ್ದರು.