ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಪ್ರವಾಸಿ ಮಂದಿರದಲ್ಲಿ ಯುವ ಕರ್ನಾಟಕ ಭೀಮಸೇನೆ ಯುವಶಕ್ತಿ ಸಂಘ 1ನೇ ವಾರ್ಡ್ ಘಟಕದಿಂದ ಆಯೋಜಿಸಿದ್ದ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಯುವ ಘಟಕದ ಅಧ್ಯಕ್ಷ ಅನಿಲ್ಕುಮಾರ ಸಿದ್ದಮ್ಮನಹಳ್ಳಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ಸಂಘಟನೆಯಿಂದ ಸಾಮಾಜಿಕ ಹೋರಾಟದ ಜೊತೆಗೆ ಶಿಕ್ಷಣದ ವ್ಯವಸ್ಥೆಯೆಲ್ಲಾಗುವ ತಪ್ಪುಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿಮ್ಮ ಹೋರಾಟಗಳಿರಲಿ. ಶಿಕ್ಷಣದಿಂದ ವಂಚಿತರಾಗುವ ಭವಿಷ್ಯದ ಯುವ ಪೀಳಿಗೆಗೆ ನಿಮ್ಮಿಂದ ಸಹಾಯ ದೊರಕಲಿ ಎಂದರು.
ಮುಖ್ಯ ಅತಿಥಿಯಾಗಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಸಂಚಾಲಕ ಶರೀಫ್ ಬಿಳೆಯಲಿ, ಕರವೇ ತಾಲೂಕು ಅಧ್ಯಕ್ಷ, ಚಲವಾದಿ ಸಮಾಜದ ಗದಗ ತಾಲೂಕು ಅಧ್ಯಕ್ಷ ಮುತ್ತಣ್ಣ ವೈ.ಚವಡಣ್ಣವರ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಖಾಜಾಸಾಬ್ ಗಬ್ಬುರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಶಹರ ಘಟಕದ ಅಧ್ಯಕ್ಷ ಶಬ್ಬೀರ್ ತಹಶೀಲ್ದಾರ್, ನಜೀರ್ ಬಳ್ಳಾರಿ, ಖಾದರ್ಭಾಷಾ ನವಲಗುಂದ, ಸಾಧಿಕ್ ಧಾರವಾಡ, ಅಬ್ದುಲ್ರಶೀದ್ ನಾಗರದಿನ್ನಿ, ಮೊಮ್ಮದ್ರಫೀಕ್ ರಾಜೀವ್ ಗಾಂಧಿ ನಗರ, ಲಿಯಾಕತಲಿ ಮುಲ್ಲಾ, ಇಮಾಮ ಕದಡಿ, ಜಹೀರ್ ಬಾಸಂಗವಾಲೆ, ಅಸ್ಪಾಕ್ ಸುಂಕದ್, ಫಾರೂಕ್ ದಂಡಿನ, ಆನಂದ್ ಗಡ್ಡದವರ, ಮುಸ್ತಫ ಶಿರೋಳ, ಸಮೀರ್ ಸರ್ಪರಾಜ ನಾಯಕರ, ಫಯಾಜ್ ಕಬಾಡಿ, ಶಾಬುದ್ದೀನ್ ಧಾರವಾಡ, ಮಾಬುಸಾಬ್ ತೌಸೀಪ್ ಗೋಗೇರಿ, ಸೋಹೀಲ್ ಶಾಬಾದ್ ಸಾಧಿಕ್ ಅರಗಂಜಿ, ಅಬ್ಬು ವಾನಂಬಾಡಿ, ಇಲ್ಯಾಸ್ ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ರಾಮು ಬಾಗಲಕೋಟೆ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ಚಿಕೆನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಜಬಿವುಲ್ಲಾ ಬೋಧ್ಲೇಖಾನ್ ವಂದಿಸಿದರು.
1ನೇ ವಾರ್ಡಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯಂಕಪ್ಪ ತಾಳದವರ, ಹೊಂಬಳ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಾವಲ್ಬಿ ರಾ.ಹೊಂಬಳ, ಸಾಧಕರಾದ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ವಸಂತ ಸಿದ್ದಮ್ಮನಹಳ್ಳಿ, ರಾಷ್ಟçಮಟ್ಟದ ಜಂಗಿ ನಿಕಾಲಿ ಕುಸ್ತಿಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ರಾಹುಲ್ ಸಿದ್ದಮ್ಮನಹಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.