ಗ್ಯಾರಂಟಿ ಯೋಜನೆ ಸಕಾಲದಲ್ಲಿ ಅರ್ಹರಿಗೆ ತಲುಪಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗೃಹಲಕ್ಷ್ಮೀ ಯೋಜನೆಯಲ್ಲಿ ಜಿ.ಎಸ್.ಟಿ. ಹಾಗೂ ಮನೆ ಯಜಮಾನಿ ನಿಧನ ಹೊಂದಿದವರ ಹೆಸರನ್ನು ಬದಲಾವಣೆ ಮಾಡಿ ಬೇರೆಯವರಿಗೆ ನೋಂದಣಿ ಮಾಡಿಸಬೇಕು. ಯಾವ ಬಡ ಕುಟುಂಬವೂ ಈ ಯೋಜನೆಯಿಂದ ದೂರ ಉಳಿಯಬಾರದು. ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ವೆ ಮಾಡಿಸುವುದು ಕಡ್ಡಾಯವಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಸೂಚನೆ ನೀಡಿದರು.

Advertisement

ಹಿರೇಹಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ರೋಣ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.

ರೋಣ ತಾಲೂಕ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ (ಮಿಥುನ್) ಜಿ.ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ಪರಶುರಾಮ ಅಳಗವಾಡಿ, ತಾಲೂಕ ಗ್ಯಾರಂಟಿ ಸಮಿತಿಯ ಸದಸ್ಯರಾದ ಶಫೀಕ್ ಮೂಗನೂರ, ಬಿ.ಎಸ್. ರಡ್ಡೇರ, ಸಂಗು ನವಲಗುಂದ, ಮೇಘರಾಜ್ ಬಾವಿ, ಸಿದ್ದಪ್ಪ ಯಾಳಗಿ, ಹನುಮಂತಪ್ಪ ಸ್ವಾಲದ, ನಾಜಬೇಗಂ ಎಲಿಗಾರ, ಬಸವರಾಜ್ ತಳವಾರ, ಸುರೇಶ್ ಬಸವ ರೆಡ್ಡಿರ, ಯಲ್ಲಪ್ಪ ಕಿರೆಸೂರು, ಬಸವರಾಜ್ ಜಗ್ಗಲ, ಶಿವಪ್ಪ ಗಾಣಿಗೇರ, ಗೀತಾ ಕೊಪ್ಪದ, ಶರಣಪ್ಪ ಕುರಿಯವರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here